Monday, March 24, 2025
Homeಸುದ್ದಿಗಳುಸಕಲೇಶಪುರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗೆ ಪ್ರತಿಭಟನೆ ಬಿಸಿ? ಡಿ 12 ಸೋಮವಾರದಿಂದ ಅಹೋ ರಾತ್ರಿ ಪ್ರತಿಭಟನೆಗೆ...

ಸಕಲೇಶಪುರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗೆ ಪ್ರತಿಭಟನೆ ಬಿಸಿ? ಡಿ 12 ಸೋಮವಾರದಿಂದ ಅಹೋ ರಾತ್ರಿ ಪ್ರತಿಭಟನೆಗೆ ಸಿದ್ಧತೆ….?

ಸಕಲೇಶಪುರಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿಗೆ ಪ್ರತಿಭಟನೆ ಬಿಸಿ?

ಡಿ 12 ಸೋಮವಾರದಿಂದ ಅಹೋ ರಾತ್ರಿ ಪ್ರತಿಭಟನೆಗೆ ಸಿದ್ಧತೆ….?

ಸಕಲೇಶಪುರ: ಜನಸಂಕಲ್ಪ ಯಾತ್ರೆ ಹಿನ್ನೆಲೆಯಲ್ಲಿ ಇದೇ 13ರಂದು ತಾಲೂಕಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಕಾಡಾನೆ ಸಂತ್ರಸ್ಥರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಎದುರಾಗುವ ಸಾಧ್ಯತೆಯಿದೆ. ಕಾಡಾನೆ ಸಂತ್ರಸ್ಥರ ಹೋರಾಟ ಸಮಿತಿಯ ಯಡೇಹಳ್ಳಿ ಮಂಜುನಾಥ್ ಮಾತನಾಡಿ ಕಾಡಾನೆ ಟಾಸ್ಕ್ ಪೋರ್ಸ್ ಪ್ರಾರಂಭವಾಗಿದೆ. ಇದರಿಂದ ತೋಟ ಗದ್ದೆಗಳಲ್ಲಿ ದಾಂದಲೆ ಮಾಡುವ ಕಾಡಾನೆಗಳನ್ನು ಓಡಿಸಲು ಅನುಕೂಲವಾಗುತ್ತದೆಂದು ಟಾಸ್ಕ್ ಪೋರ್ಸ್ ನ ಮೊಬೈಲ್ ಸಂಖ್ಯೆಯನ್ನು ಎಲ್ಲೆಡೆ ಷೇರ್ ಮಾಡಿದ್ದೆವು. ಇದೀಗ ಈ ಸಂಖ್ಯೆ ಕಾರ್ಯನಿರ್ವಹಿಸುತ್ತಿಲ್ಲದಿರುವುದು ಟಾಸ್ಕ್ ಪೋರ್ಸ್ ನ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಮಂಗಳವಾರ ಸಂಜೆ ಕಾಡಾನೆ ಟಾಸ್ಕ್ ಪೋರ್ಸ್ ಕಾರ್ಯ ತರಾತುರಿಯಲ್ಲಿ ಆರಂಭವಾಗಿದೆ. ಕೂಡಲೆ ಇನ್ನೆರಡು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಂಡು ಟಾಸ್ಕ್ ಪೋರ್ಸ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಲ್ಲಿ ಮುಖ್ಯಮಂತ್ರಿಗಳ ವಿರುದ್ದ ಪ್ರತಿಭಟನೆ ಮಾಡಲಾಗುತ್ತದೆ ಎಂದಿದ್ದಾರೆ.

RELATED ARTICLES
- Advertisment -spot_img

Most Popular