Monday, March 24, 2025
Homeಸುದ್ದಿಗಳುಸಕಲೇಶಪುರಹೆತ್ತೂರು ಗ್ರಾಮ ಪಂಚಾಯತಿ ವತಿಯಿಂದ ರಸ್ತೆ ಬದಿ ಕಸ ವಿಲೇವಾರಿ: ಗ್ರಾಮಸ್ಥರ ಆಕ್ರೋಷ

ಹೆತ್ತೂರು ಗ್ರಾಮ ಪಂಚಾಯತಿ ವತಿಯಿಂದ ರಸ್ತೆ ಬದಿ ಕಸ ವಿಲೇವಾರಿ: ಗ್ರಾಮಸ್ಥರ ಆಕ್ರೋಷ

ಸಕಲೇಶಪುರ; ತಾಲೂಕಿನ ಹೆತ್ತೂರು ಗ್ರಾ.ಪಂ ವತಿಯಿಂದ ಹೆತ್ತೂರು ಗ್ರಾಮದಲ್ಲಿ ಕಸ ಸಂಗ್ರಹ ಮಾಡಿದನ್ನು ಸಮೀಪದ ಮೆಕ್ಕಿರಮನೆ ರಸ್ತೆ ಬದಿಯಲ್ಲಿ ಸುರಿಯಲಾಗುತ್ತಿದೆ. ಇದು ಗಾಳಿಗೆ ಹಾರುವುದಲ್ಲದೆ ,ಬೀದಿ ನಾಯಿಗಳು,ಬೀಡಾಡಿ ದನಗಳು ಸಹ ಕಸವನ್ನು ಎಳೆದು ಹಾಕುವುದರಿಂದ ರಸ್ತೆ ತುಂಬೆಲ್ಲಾ ಕಸ ಹರಡಿದೆ.ಇದರಿಂದ ರಸ್ತೆ ಗಬ್ಬು ನಾರುತ್ತಿದ್ದು ರಸ್ತೆ ಯಲ್ಲಿ ಪ್ರತಿ ದಿನ ಗ್ರಾಮಸ್ಥರು,ವಿದ್ಯಾರ್ಥಿಗಳು, ಮೂಗು ಮುಚ್ಚಿಕೊಂಡು ಓಡಾಡಬೇಕೆಂದು ಗ್ರಾಮಸ್ಥರು ದೂರಿದ್ದಾರೆ.ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರು ಏನೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥ ಮಂಜುನಾಥ ದೂರಿದ್ದಾರೆ.

RELATED ARTICLES
- Advertisment -spot_img

Most Popular