Big Breaking News : ಸಕಲೇಶಪುರ ಅಪರಾಧ ಚಟುವಟಿಕೆ ಉಳ್ಳ ಇಬ್ಬರನ್ನು ಗಡಿಪಾರು ಮಾಡಿ ಆದೇಶ.
ಸಕಲೇಶಪುರ : ತಾಲೂಕಿನಲ್ಲಿ ನಿರಂತರ ಅಪರಾಧ ಚಟುವಟಿಕೆಗಳಲ್ಲಿ ಬಾಗಿಯಾಗುತ್ತಿದ್ದ ಇಬ್ಬರನ್ನು ಗಡಿಪಾರು ಮಾಡಿ ಪೊಲೀಸ್ ಇಲಾಖೆ ಆದೇಶಿಸಿದೆ.
ಪಟ್ಟಣದಲ್ಲಿ ಗೋ ಮಾಂಸ ಕಡಿದು ಸಾಗಾಟ ಹಾಗೂ ಮಾರಾಟದಲ್ಲಿ ತೊಡಗಿಸಿಕೊಂಡಿದ್ದ ಫರೀದ್ ಹಾಗೂ ಜೂಜು ನೆಡೆಸುತ್ತಿದ್ದ ಉಮೇಶ್ ಎಂಬುವರನ್ನು ಸಕಲೇಶಪುರ ಉಪವಿಭಾಗ ವ್ಯಾಪ್ತಿಯಿಂದ ಗಡಿಪಾರು ಮಾಡಲಾಗಿದೆ.
ಪೊಲೀಸ್ ಇಲಾಖೆಯ ಎಚ್ಚರಿಕೆಯ ನಡುವೆಯು ನಿರಂತರವಾಗಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಅಶಾಂತಿಗೆ ಕಾರಣರಾಗಿದ್ದರು.