Monday, March 17, 2025
Homeಸುದ್ದಿಗಳುಪಾಕಿಸ್ತಾನದ ಮಗುವಿಗೆ ಮರುಜೀವ ಕೊಟ್ಟ ಬೆಂಗಳೂರಿನ ವೈದ್ಯರು

ಪಾಕಿಸ್ತಾನದ ಮಗುವಿಗೆ ಮರುಜೀವ ಕೊಟ್ಟ ಬೆಂಗಳೂರಿನ ವೈದ್ಯರು

ಪಾಕಿಸ್ತಾನದ ಮಗುವಿಗೆ  ಬೆಂಗಳೂರಿನ  ನಾರಾಯಣ ಹೆಲ್ತ್ ಸಿಟಿ ವೈದ್ಯರು  ಮರುಜೀವವನ್ನು ನೀಡುವ ಮೂಲಕ ಆತಂಕದಲ್ಲಿದ್ದ ತಾಯಿಯ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡಿದ್ದಾರೆ.

ಪಾಕಿಸ್ತಾನದ ಮಗು ಅಮೈರಾ(2)ಗೆ ಎಂಪಿಎಸ್ ಎನ್ನುವ ವಿಚಿತ್ರ ಕಾಯಿಲೆ ಕಾಡಿತ್ತು. ಕಣ್ಣು ಮೆದುಳು ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಇದ್ರಿಂದ ಪರಿಣಾಮ ಬೀರುತ್ತಿದೆ. ಅಮೈರಾ ತಂದೆ, ತಾಯಿ ಪಾಕಿಸ್ತಾನ ಸೇರಿದಂತೆ ಭಾರತದ ಬೇರೆ ಭಾಗದ ಆಸ್ಪತ್ರೆ ಸಂಪರ್ಕಿಸಿದ್ದಾರೆ. ಆದರೆ, ಮಗುವಿನ ಜೀವಕ್ಕೆ ಎಲ್ಲೂ ಗ್ಯಾರಂಟಿ ಕೊಟ್ಟಿಲ್ಲ. ಕೊನೆಗೆ ಬೆಂಗಳೂರು ನಾರಾಯಣ ಹೆಲ್ತ್ ಸಿಟಿಯಲ್ಲಿ ಅಮೈರಾಗೆ ಆಕೆಯ ತಂದೆಯಿಂದ ಮೂಳೆ ಮಜ್ಜೆ ಕಸಿಯ ಮೂಲಕ ಟ್ರೀಟ್‍ಮೆಂಟ್ ಕೊಡಲಾಗಿದ್ದು, ಅಮೈರಾ ಚೇತರಿಸಿಕೊಂಡಿದ್ದಾಳೆ. ತನ್ನ ಮಗಳ ಬದುಕಿಗೆ ಹೊಸ ಜೀವ ಕೊಟ್ಟ ವೈದ್ಯರಿಗೆ ಅಮೈರಾ ತಾಯಿ ಧನ್ಯವಾದ ಹೇಳಿದರು.

RELATED ARTICLES
- Advertisment -spot_img

Most Popular