Monday, March 24, 2025
Homeಸುದ್ದಿಗಳುಸಕಲೇಶಪುರಒಗ್ಗಟ್ಟಿನ ಮಂತ್ರ ಜಪಿಸಿದ ದಲಿತ ಸಮುದಾಯ

ಒಗ್ಗಟ್ಟಿನ ಮಂತ್ರ ಜಪಿಸಿದ ದಲಿತ ಸಮುದಾಯ

ಸಕಲೇಶಪುರ: ತಾಲೂಕಿನಲ್ಲಿ ದಲಿತ ಸಂಘಟನೆಗಳ ನಡುವೆ ಉಂಟಾಗಿರುವ ಸಮಸ್ಯೆಯನ್ನು ನಿವಾರಿಸಿಕೊಂಡು ಒಗ್ಗಟ್ಟಿನಿಂದ ಕಾರ್ಯಕ್ರಮಗಳನ್ನು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

    ಪಟ್ಟಣದಲ್ಲಿ ತಾಲೂಕಿನಲ್ಲಿರುವ ದಲಿತ ಸಮುದಾಯದ ಎಲ್ಲಾ ಸಂಘ ಸಂಸ್ಥೆಯ ಹಿರಿಯ ಮುಖಂಡರುಗಳು, ಯುವಕರು, ಮತ್ತು ಸಮುದಾಯದ ರಾಜಕೀಯ ನಾಯಕರುಗಳು ಸೇರಿದಂತೆ ಎಲ್ಲರ ಸಮ್ಮುಖದಲ್ಲಿ ಸಭೆ ನಡೆದು ಸಮುದಾಯದ ಒಳಿತು ಕೆಡುಕುಗಳ ಬಗ್ಗೆ ಸಮಾಲೋಚಿಸಲಾಯಿತು. ಹಿರಿಯರ ಒಪ್ಪಿಗೆ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಯಾವುದೇ ಸಂಘ ಸಂಸ್ಥೆಗಳಿದ್ದರೂ ಸಮುದಾಯ ಅಂತ ಬಂದಾಗ ಎಲ್ಲರೂ ಒಂದೇ ವೇದಿಕೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ, ಒಗ್ಗಟ್ಟು ಪ್ರದರ್ಶಿಸೋಣ ಎಂಬ ತೀರ್ಮಾನ ಕೈಗೊಳ್ಳಲಾಯಿತು.  ಅಂಬೇಡ್ಕರ್  ಜಯಂತಿ, ಅಂಬೇಡ್ಕರ್ ಪರಿನಿಬ್ಬಾಣ ದಿನ, ಭೀಮ ಕೋರೆಗಾವ್ ವಿಜಯೋತ್ಸವ ದಿನ ಸೇರಿದಂತೆ ಸಮುದಾಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಎಲ್ಲಾರು ಒಟ್ಟಾಗಿ ನಡೆಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು.

RELATED ARTICLES
- Advertisment -spot_img

Most Popular