ಕೆ. ಎಸ್ ಆರ್ .ಟಿ .ಸಿ ನೌಕರ ಅತ್ಮಹತ್ಯೆಗೆ ಶರಣು.
ಸಕಲೇಶಪುರ : ಮಂಗಳವಾರ ಕೆ,ಆರ್,ಟಿ,ಸಿ ಬಸ್ಸ್ ಚಾಲಕ ಹಾಗೂ ಕಂಡಕ್ಟರ್ ವೃತಿ ಮಾಡುತ್ತಿದ್ದ ನೌಕರ ಮನೆಯಲ್ಲಿಯೇ
ಸುಮಾರು 8 ಗಂಟೆಗೆ ನೇಣಿಗೆ ಶರಣಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.ಯು , ಆರ್ ಕುಮಾರ್ ಕೆಲವು ದಿನಗಳಿಂದ ಕೆಲಸಕ್ಕೆ ಬಾರದೇ ಏಕಾಂತವಾಗಿ ಮನೆಯಲ್ಲಿಯೇ ಕಾಲ ಕಳೆದು ಕೌಟುಂಬಿಕ ಕಲಹಗಳಿಂದ ಮನನೊಂದು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ ಇವರು ಮೂಲತಹ ಸಕ್ಕರಾಯಪಟ್ಟಣದ ಉದ್ದೇಬೋರನಹಳ್ಳಿಯ ನಿವಾಸಿಯಾಗಿದ್ದು ಕೆಲಸದ ನಿಮ್ಮಿತವಾಗಿ
ಸಕಲೇಶ್ವರ ದೇವಸ್ಥಾನದ ಹತ್ತಿರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕೇವಲ 48 ವರ್ಷದ ಪ್ರಾಯವಾಗಿದ್ದ ಇವರಿಗೆ ಮೂರು ಜನ ಪತ್ನಿಯರನ್ನು ಹೊಂದಿದ್ದು,
ಮೂದಲನೇಯ ಪತ್ನಿಯಿಂದ ಡಿವೋರ್ಸ ಆಗಿದ್ದು, ಎರಡನೇ ಪತ್ನಿಯ ಮಾಹಿತಿ ಇದೂವರೆಗೂ ತಿಳಿದು ಬಂದಿಲ್ಲ. ಆದರೆ ಮೂರನೇ ಪತ್ನಿಗೆ ಒಂದು ಮಗುಯಿದೆ ಎಂಬ ಮಾಹಿತಿ ತಿಳಿದು ಬಂದಿದೆ.ಇವರುಉದಯವಾರ ಹಾಗೂ ಮೈಸೂರ್ ರೂಟ್ಗಳಲ್ಲಿ ಬಸ್ಸ್ ಚಾಲನೆ ಮಡುವ ಮುಖಾಂತರ ಉದಯವಾರದ ಹಳ್ಳಿಗರ ಉತ್ತಮ ಸ್ನೇಹ ಸಂಪಾದಿಸಿ ಕೊಂಡಿದ್ದರು.
ಈ ಘಟನೆಗೆ ಸಂಭಂಧ ಪಟ್ಟಂತೆ ಪೋಲೀಸರು ಸ್ಥಳಕ್ಕೆ ಸ್ವಗೃಹಕ್ಕೆ ಭೇಟಿ ನೀಡಿ F I R ದಾಖಲಿಸಿಕೊಂಡಿದ್ದಾರೆ. ಶವವನ್ನು ಶವಗಾರ ಗೃಹಕ್ಕೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.