Monday, March 24, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಗಡಿಯಂಚಿನ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್...

ಸಕಲೇಶಪುರ : ಗಡಿಯಂಚಿನ ಗ್ರಾಮಗಳಿಗೆ ಬಸ್ ಸೌಕರ್ಯ ಕಲ್ಪಿಸುವಂತೆ ಮಾಜಿ ಮುಖ್ಯಮಂತ್ರಿ ಎಚ್ .ಡಿ ಕುಮಾರಸ್ವಾಮಿ ಪತ್ರ

ಸಕಲೇಶಪುರ;ತಾಲೂಕಿನ ಹಿರದನಹಳ್ಳಿ ಕಡಗರಹಳ್ಳಿ ಮಾರ್ಗವಾಗಿ ಬೆಂಗಳೂರು ಹಾಗೂ ಮಂಗಳೂರಿಗೆ ಪ್ರತಿ ನಿತ್ಯ ಬಸ್ ಸಂಚಾರ ಕಲ್ಪಿಸುವಂತೆ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ ಕುಮಾರ ಸ್ವಾಮಿ ರವರು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಗೆ ಪತ್ರ ಬರೆದಿದ್ದಾರೆ.
ತಾಲೂಕಿನ ಹಿರದನಹಳ್ಲಿ ಹೆಚ್ ಟಿ ಪುಟ್ಟಸ್ವಾಮಿ ಹಾಗೂ ಗ್ರಾಮಸ್ಥರು ಮಾಡಿದ ಮನವಿ ಮೇರೆಗೆ ಬೆಳಿಗ್ಗೆ ೭ ಗಂಟೆಗೆ ಬೆಂಗಳೂರು ನಿಂದ ಶನಿವಾರಸಂತೆ ಹೆತ್ತೂರು ಮಾರ್ಗ ವಾಗಿ ಹಿರದನಹಳ್ಲಿ ಮಾರನಹಳ್ಳಿ ಮೂಲಕ ಧರ್ಮಸ್ಥಳ ಮಂಗಳೂರಿಗೆ
ಹಾಗೂ ಮರುದಿನ ಮಂಗಳೂರು ನಿಂದ ಸುಬ್ರಹ್ಮಣ್ಯ ಗುಂಡ್ಯ ಮಾರನಹಳ್ಳಿ, ಹಿರದನಹಳ್ಳಿ ಶನಿವಾರಸಂತೆ ಮಾರ್ಗ ವಾಗಿ ಬೆಂಗಳೂರು ತಲುಪುವಂತೆ ಬಸ್ ಸಂಚಾರ ಆರಂಬಿಸುವಂತೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಇದರಿಂದ ಪಶ್ಚಿಮ ಘಟ್ಟದ ತಪ್ಪಲಿ ಕುಗ್ರಾಮದ ಜನರಿಗೆ ಆಸ್ಪತ್ರೆ , ಶಾಲೆ ಕಾಲೇಜು ಗಳಿಗೆ ಇನ್ನಿತರ ತುರ್ತು ಸಂದರ್ಭಗಳಲ್ಲಿ ಬೆಂಗಳೂರು ಹಾಗೂ ಮಂಗಳೂರು ತಲುಪಲು ಅನುಕೂಲವಾಗಲಿದೆ.

RELATED ARTICLES
- Advertisment -spot_img

Most Popular