*ಸಕಲೇಶಪುರ :ವಿಶೇಷ ಚೇತನ ಮಕ್ಕಳಿಗೆ ಉಚಿತ ಮೌಲ್ಯಾಂಕನ ಶಿಬಿರ*
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಕಲೇಶಪುರ ಇವರ ಸಹಯೋಗದಲ್ಲಿ ಸಕಲೇಶಪುರ ತಾಲ್ಲೂಕಿನಲ್ಲಿ 1 ರಿಂದ 12 ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿಶೇಷ ಚೇತನ ಮಕ್ಕಳಿಗೆ ಉಚಿತ ಮೌಲ್ಯಾಂಕನ ಶಿಬಿರ ಆಯೋಜಿಸಲಾಗಿತ್ತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಎಚ್ ಎನ್ ಕ್ರಿಷ್ಣಮೂರ್ತಿ ವಹಿಸಿದ್ದರು
ಉದ್ಘಾಟನೆ ನೆರವೇರಿಸಿ ತಾಲೂಕು ಆರೋಗ್ಯಾಧಿಕಾರಿಗಳಾದ ಶ್ರೀ ಮಹೇಶ್ ರವರು ವಹಿಸಿದ್ದರು
‘ಅನುಕಂಪ ಬೇಡ ಅವಕಾಶ ನೀಡಬೇಕು ವಿಶೇಷ ಚೇತನ ಮಕ್ಕಳಲ್ಲಿ ಇರುವ ಪ್ರತಿಭೆ ಗುರುತಿಸುವ ಕಾರ್ಯ ಪ್ರಸ್ತುತ ಆಗಬೇಕು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ತಾಲ್ಲೂಕಿನಾದ್ಯಂತ ವಿಶೇಷ ಚೇತನ ಮಕ್ಕಳು ಪೋಷಕರೊಂದಿಗೆ ಭಾಗವಹಿಸಿದ್ದರು ವೈಧ್ಯಾಧಿಕಾರಿಗಳಾದ ಡಾ. ರತ್ನಾಕರ ಕಿಣಿ ನೇತ್ರ ತಜ್ಞ ಡಾ ಗೀತಾ ರವರು ತಪಾಸಣೆ ನೇತ್ರತ್ವ ವಹಿಸಿದ್ದರು
ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಮಂಜುನಾಥ್, ಪ್ರಭಾರ ಬಿ ಆರ್ ಸಿ ಗಂಗಾಧರ,ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ಖುಷ್ವಂತ್ ನೌಕರರ ಸಂಘದ ಖಜಾಂಚಿ ಜಗದೀಶ್, ಬಿ ಆರ್ ಪಿ ದಿನೇಶ್, ವಸಂತ, ಶೇಖರ್ ಭಾಗವಹಿಸಿದ್ದರು