Friday, March 21, 2025
Homeಸುದ್ದಿಗಳುಕಾಡಾನೆ ದಾಳಿಯಿಂದ ಮೃತಪಟ್ಟ ಮನು: ಅನಾಥವಾದ ಕುಟುಂಬ

ಕಾಡಾನೆ ದಾಳಿಯಿಂದ ಮೃತಪಟ್ಟ ಮನು: ಅನಾಥವಾದ ಕುಟುಂಬ

ಸಕಲೇಶಪುರ: ಕಾಡಾನೆ ದಾಳಿಯಿಂದಾಗಿ ತಾಲೂಕಿನಲ್ಲಿ ಬೆಳಗೋಡು ಹೋಬಳಿ ಸಮೀಪ ಮನು ( 32 ) ಎಂಬ ರೈತ ಮೃತಪಟ್ಟಿರುವುದರಿಂದ ಈತನ ಕುಟುಂಬ ಅಕ್ಷರಶಃ ಅನಾಥವಾಗಿದೆ.

ಮೃತ ಮನುವಿಗೆ ಪತ್ನಿ ಹಾಗೂ ಮೂರುವರೆ ವರ್ಷದ ಮಗನಿದ್ದು ಮನುವಿನ ಸಾವಿನಿಂದ ಕುಟುಂಬ ಸಂಕಷ್ಠಕ್ಕೆ ಸಿಲುಕಿದೆ‌. ಮನುವಿನ ಮನೆಯ ಪಕ್ಕದಲ್ಲೆ ಈತನ ಅಣ್ಷನ‌ ಕುಟುಂಬವಿದ್ದು ಮನುವಿನ ಅಣ್ಣ ಹಾಗೂ ತಾಯಿ ಸಹ ಮನುವಿನ ಸಾವಿನಿಂದ ದಿಗ್ರಮೆಗೆ ಒಳಗಾಗಿದ್ದಾರೆ. ತಾಲೂಕಿನಲ್ಲಿ ಕಾಡಾನೆ ದಾಳಿಯಿಂದ ಸುಮಾರು 75 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.ಆದರು ಸಹ ಸರ್ಕಾರಗಳು ಸಮಸ್ಯೆಗೆ ಶಾಶ್ವತ‌ ಪರಿಹಾರ ಹುಡುಕುವಲ್ಲಿ ವಿಫಲವಾಗಿರುವುದು ದುರಂತವಾಗಿದೆ.

RELATED ARTICLES
- Advertisment -spot_img

Most Popular