Monday, March 17, 2025
Homeಸುದ್ದಿಗಳುಹೊಸಕೋಟೆಯ ಕೆ.ಎಸ್. ಆರ್. ಟಿ. ಸಿ ನೌಕರ ವಸಂತ ಇನ್ನಿಲ್ಲ.

ಹೊಸಕೋಟೆಯ ಕೆ.ಎಸ್. ಆರ್. ಟಿ. ಸಿ ನೌಕರ ವಸಂತ ಇನ್ನಿಲ್ಲ.

 

ಸಕಲೇಶಪುರ : ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆಯ ವೀರಶೈವ ಸಂಘದ ಕಾರ್ಯದರ್ಶಿ ಹಾಗೂ ಹಾಸನ ವಿಭಾಗದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ ಕಂ‌ ಕಂಡಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವಸಂತ (46) ರವರು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ.
ಮೃತ ವಸಂತ್ ರವರು ಕೆ.ಎಸ್.ಆರ್.ಟಿ.ಸಿ ಹಾಸನ ವಿಭಾಗದಲ್ಲಿ ನೌಕರರ ಸಂಘಟನೆಯಲ್ಲಿ ವಿವಿಧ ಕಾರ್ಯವನ್ನು ನಿರ್ವಹಿಸಿದ್ದು ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದರು.
ಅದೇ ರೀತಿಯಲ್ಲಿ ತಮ್ಮ ಸ್ವಗ್ರಾಮ ಹೊಸಕೋಟೆಯಲ್ಲಿ ಬಸವೇಶ್ವರ ವೀರಶೈವ ಸಂಘಟನೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಂಘಟನೆ ಬೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

RELATED ARTICLES
- Advertisment -spot_img

Most Popular