Thursday, February 20, 2025
Homeಸುದ್ದಿಗಳುಸಕಲೇಶಪುರಕೂಲಿ ಕಾರ್ಮಿಕರಿದ್ದ ವ್ಯಾನ್ ಪಲ್ಟಿ : ನಾಲ್ವರಿಗೆ ಗಂಭೀರ ಗಾಯ.

ಕೂಲಿ ಕಾರ್ಮಿಕರಿದ್ದ ವ್ಯಾನ್ ಪಲ್ಟಿ : ನಾಲ್ವರಿಗೆ ಗಂಭೀರ ಗಾಯ.

ಕೂಲಿ ಕಾರ್ಮಿಕರಿದ್ದ ವ್ಯಾನ್ ಪಲ್ಟಿ : ನಾಲ್ವರಿಗೆ ಗಂಭೀರ ಗಾಯ.

ಸಕಲೇಶಪುರ ತಾಲೂಕು ನಿಡನೂರು ಕೂಡಿಗೆ ಬಳಿ ದುರ್ಘಟನೆ.

ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಮುಂಜಾನೆ ನೆಡೆದ ಅಪಘಾತದಲ್ಲಿ ಹಲವು ಕೂಲಿ ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ.

ತಾಲೂಕಿನ ಬಾಳ್ಳುಪೇಟೆ ಸಮೀಪದ ನಿಡನೂರು ಬಳಿ ದುರ್ಘಟನೆ ಸಂಭವಿಸಿದ್ದು ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ತಮಿಳುನಾಡಿನ ಸೇಲಂ ನಿಂದ ಮಡಿಕೇರಿ ಜಿಲ್ಲೆಯ ಶನಿವಾರಸಂತೆಯ ಬಳಿಯ ಕಾಫಿ ಎಸ್ಟೇಟ್ ಯೊಂದಕ್ಕೆ ಕಾಫಿಯನ್ನು ಕುಯ್ಲಿಗೆ ಬರುತ್ತಿದ್ದಾಗ ದುರ್ಘಟನೆ ನಡೆದಿದೆ. ಟಾಟಾ ವಿಂಗರ್ ವಾಹನದಲ್ಲಿ ಸುಮಾರು ಒಂದು ಪುಟ್ಟ ಮಗು ಸೇರಿದಂತೆ 14 ಜನ ಕೂಲಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು.ವೇಗವಾಗಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ರಸ್ತೆ ಬದಿಗೆ ಪಲ್ಟಿಯಾಗಿ ಬಿದ್ದಿದೆ. ಅಪಘಾತ ರಭಸಕ್ಕೆ ಕೂಲಿ ಕಾರ್ಮಿಕರ ಬಟ್ಟೆ, ಪಾತ್ರೆ, ಆಹಾರ ಸಾಮಗ್ರಿಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದವು. ಗಾಯಾಳುಗಳನ್ನು ಹಾಸನ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕಳಿಸಿ ಕೊಡಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -spot_img

Most Popular