Saturday, April 12, 2025
Homeಸುದ್ದಿಗಳುಸಕಲೇಶಪುರಶಾಲೆಗೆ ಬಂದ ಕಾಡಾನೆಗಳಿಂದ ಕಬ್ಬಿಣದ ಗೇಟ್ ಧ್ವಂಸ

ಶಾಲೆಗೆ ಬಂದ ಕಾಡಾನೆಗಳಿಂದ ಕಬ್ಬಿಣದ ಗೇಟ್ ಧ್ವಂಸ

ಸಕಲೇಶಪುರ: ಪಟ್ಟಣಕ್ಕೆ ಸಮೀಪವಿರುವ ಕೌಡಹಳ್ಳಿ ಗ್ರಾಮಕ್ಕೆ ಕಾಡಾನೆಗಳ ಹಿಂಡೊಂದು ಬಂದು ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ಕಬ್ಬಿಣದ ಗೇಟ್ ನ್ನು ಧ್ವಂಸ ಮಾಡಿದೆ. ದಸರಾ ಹಿನ್ನೆಲೆಯಲ್ಲಿ ಶಾಲೆಗೆ ರಜಾವಿದ್ದಿದ್ದರಿಂದ ಯಾವುದೆ ಅನಾಹುತ ಸಂಭವಿಸಿಲ್ಲ. ಕಳೆದ ಮೂರು ದಿನಗಳಿಂದ ಕೌಡಹಳ್ಳಿ ಗ್ರಾಮದಲ್ಲಿ 6 ಕಾಡಾನೆಗಳ ಹಿಂಡೊಂದು ಹಗಲೇ ಸಂಚರಿಸುತ್ತ ಅಪಾರ ಪ್ರಮಾಣದ ಕಾಫಿ, ಮೆಣಸು ಗಿಡಗಳನ್ನು ಧ್ವಂಸ ಮಾಡಿರುವುದು ಗ್ರಾಮಸ್ಥರನ್ನು ಆತಂಕಕ್ಕೆ ತಳ್ಳಿದೆ.

RELATED ARTICLES
- Advertisment -spot_img

Most Popular