ನೂತನ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಶುಭ ಕೋರಿದ ಸ್ನೇಹಜೀವಿ ಗಣೇಶ್
ಆಲೂರು: ಬಾಕಿ ಉಳಿದಿದ್ದ 10 ಜಿಲ್ಲಾ ಘಟಕಗಳ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಹಾಸನ ಜಿಲ್ಲಾ ನೂತನ ಅಧ್ಯಕ್ಷರಾಗಿ ಸಿದ್ದೇಶ್ ನಾಗೇಂದ್ರ ಅವರು ಆಯ್ಕೆಯಾಗಿದ್ದ ಹಿನ್ನೆಲೆ ಸ್ನೇಹಜೀವಿ ಗಣೇಶ್ ರವರು ಶುಭ ಕೋರಿ ಅಭಿನಂದನೆ ಸಲ್ಲಿಸಿದ್ದಾರೆ.
ಆಲೂರು ತಾಲ್ಲೂಕು ಬಿಜೆಪಿ ಯುವ ಮುಖಂಡರು ಹಾಗೂ ಬೈರಾಪುರ ಗ್ರಾ.ಪಂ ಸದಸ್ಯರಾದ ಗಣೇಶ್ ರವರು ವಾಸ್ತವ ನ್ಯೂಸ್ ದೊಂದಿಗೆ ಮಾತನಾಡಿ, ಸಿದ್ದೇಶ್ ನಾಗೇಂದ್ರ ರವರ ಅಧಿಕಾರ ಅವಧಿಯಲ್ಲಿ ಪಕ್ಷ ಜಿಲ್ಲೆಯಲ್ಲಿ ಸದೃಢವಾಗಿ ಬೆಳೆದಿದ್ದು ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ನಾಗೇಂದ್ರ ರವರ ಕಾರ್ಯ ಕ್ಷಮತೆಗೆ ರಾಜ್ಯ ಬಿಜೆಪಿ ಮತ್ತೊಮ್ಮೆ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಜಿಲ್ಲೆಯ ಕಾರ್ಯಕರ್ತರಲ್ಲಿ ಹೊಸ ಹುರುಪು ಹಾಗೂ ವಿಶ್ವಾಸ ಮೂಡಿಸಿದೆ. ಸಿದ್ದೇಶ್ ನಾಗೇಂದ್ರ ರವರು ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮದೇ ಅದ ಚಾಪು ಮೂಡಿಸಿದ್ದು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಸದೃಢವಾಗಿ ಬೆಳೆಯುವುದರೊಂದಿಗೆ ಮುಂಬರುವ ಎಲ್ಲ ಚುನಾವಣೆ ಗಳಲ್ಲಿ ಜಯಭೇರಿ ಬಾರಿಸುವಲ್ಲಿ ಯಶಸ್ವಿ ಯಾಗಲಿದೆ ಎಂದು ತಿಳಿಸಿದರು.