ಹಲಸುಲಿಗೆ ಗ್ರಾ.ಪಂ ಅಧ್ಯಕ್ಷರಾಗಿ ನೇತ್ರಾವತಿ ಆಯ್ಕೆ
ಸಕಲೇಶಪುರ: ತಾಲೂಕಿನ ಹಲಸುಲಿಗೆ ಗ್ರಾ.ಪಂ ಅಧ್ಯಕ್ಷರಾಗಿ ನೇತ್ರಾವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷರ ವಿರುದ್ದ ಇತರ ಸದಸ್ಯರು ಅವಿಶ್ವಾಸ ನಿರ್ಣಯ ತಂದಿದ್ದರಿಂದ ಇಂದು ಚುನಾವಣೆ ನಡೆದು ನೇತ್ರಾವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಗಂಗಾಧರ್ ಕಾರ್ಯನಿರ್ವಹಿಸಿದರು.
ಈ ಸಂಧರ್ಭದಲ್ಲಿ ಪಿಡಿಓ ಪಲ್ಲವಿ, ಉಪಾಧ್ಯಕ್ಷ ಚಂದ್ರು, ಸದಸ್ಯರುಗಳಾದ ಗಿಡ್ಡೇಗೌಡ, ಭರತ್, ಜಯಂತಿ, ಶ್ರುತಿ ಇಂದ್ರೇಶ್, ಕೃಷ್ಣ ಇತರರು ಹಾಜರಿದ್ದರು.