ಕಟ್ಟಾಯ ಹೋಬಳಿಯ ರಸ್ತೆಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ – ಶಾಸಕ ಸಿಮೆಂಟ್ ಮಂಜು.
ಹಾಸನ: ಕಟ್ಟಾಯ ಹೋಬಳಿ ವಿವಿಧ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಶಾಸಕ ಸಿಮೆಂಟ್ ಮಂಜು ಭೂಮಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಸಕಲೇಶಪುರ, ಆಲೂರು. ಕಟ್ಟಾಯ ವಿಧಾನಸಭಾ ಕ್ಷೇತ್ರದ ಸತ್ತಿಗರಹಳ್ಳಿ,ಕಬ್ಬತಿ ಗೊರೂರು ರಸ್ತೆಯಿಂದ ಸತ್ತಿಗರಹಳ್ಳಿ ಕೊಪ್ಪಲು ಹಾಗೂ ಗಾಣಿಗರ ಕೊಪ್ಪಲು ಯಿಂದ ಕಟ್ಟಾಯ, ಗೊರೂರು ರಸ್ತೆವರೆಗೂ ಮರು ಡಾಂಬರೀಕರಣ ಕಾರ್ಯಕ್ರಮ ನೆಡೆಯಲಿದೆ. ರಸ್ತೆ ತೀರಾ ಹಾಳಾಗಿದ್ದು ಈ ಭಾಗದ ಸಾರ್ವಜನಿಕರು ದುರಸ್ತಿ ಪಡಿಸುವಂತೆ ಹಲವು ಬಾರಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲಾಗುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಸಾವಿರಾರು ಕೋಟಿ ರೂಪಾಯಿ ವ್ಯಯಿಸುತ್ತಿರುವುದ್ದರಿಂದ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನದ ಕೊರತೆ ಎದುರಾಗಿದ್ದು ಬರುತ್ತಿರುವ ಅನುದಾನಕನುಗುಣವಾಗಿ ತುರ್ತು ಅವಶ್ಯಕತೆ ಇರುವ ರಸ್ತೆಗಳ ಅಭಿವೃದ್ಧಿಗೆ ನೀಲಿ ನಕ್ಷೆ ತಯಾರಿಸಿ ಪ್ರಮುಖವಾಗಿ ತೀರ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಮಳೆಗಾಲ ಪ್ರಾರಂಭವಾಗುವುದರೊಳಗೆ ಗುಣಮಟ್ಟದಿಂದ ಕೂಡಿದ ರಸ್ತೆ ಕಾಮಗಾರಿಯನ್ನು ಮುಗಿಸುವಂತೆ ಸೂಚಿಸಿದರು.
ಈ ಸಂಧರ್ಭದಲ್ಲಿ ಪಿಡಿಓ ಪುಷ್ಪಲತಾ, ಕಟ್ಟಾಯ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಹರೀಶ್ ಕೊಡರಾಮನಹಳ್ಳಿ, ಬೆಜೆಪಿ ಮುಖಂಡರಾದ ಅಮೃತ್ ಕಟ್ಟಾಯ, ನಿತಿನ್ ಗೌಡ ಉಡುವಾರೆ,ಕಿರಣ್, ನಿಸರ್ಗ ಸತೀಶ್, ಚನ್ನಕೇಶವ ಗೌಡ ಕಾರ್ಲೆ, ಜಿ.ಕೆ ಕುಮಾರಸ್ವಾಮಿ,ಮನು, ಗಿರೀಶ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.