Saturday, April 12, 2025
Homeಸುದ್ದಿಗಳುಸಕಲೇಶಪುರಬಿಜೆಪಿ ಮುಖಂಡ ಬಾಳ್ಳು ಮಲ್ಲಿಕಾರ್ಜುನ್ ಗೆ ಕಾರ್ಯಕರ್ತರಿಂದ ಗೌರವ ಸಮರ್ಪಣೆ

ಬಿಜೆಪಿ ಮುಖಂಡ ಬಾಳ್ಳು ಮಲ್ಲಿಕಾರ್ಜುನ್ ಗೆ ಕಾರ್ಯಕರ್ತರಿಂದ ಗೌರವ ಸಮರ್ಪಣೆ

ಬಿಜೆಪಿ ಮುಖಂಡ ಬಾಳ್ಳು ಮಲ್ಲಿಕಾರ್ಜುನ್ ಗೆ ಕಾರ್ಯಕರ್ತರಿಂದ ಗೌರವ ಸಮರ್ಪಣೆ

ಸಕಲೇಶಪುರ : ವಿಧಾನಸಭಾ ಚುನಾವಣೆ ವೇಳೆ ಕ್ರಿಯಾಶೀಲತೆಯಿಂದ ಕಾರ್ಯಕರ್ತರನ್ನು ಒಗ್ಗೂಡಿಸಿ ಶಾಸಕ ಸಿಮೆಂಟ್ ಮಂಜುನಾಥ್ ಗೆಲುವಿಗೆ ಸಹಕರಿಸಿದ ಬಿಜೆಪಿ ಮುಖಂಡ ಹಾಗೂ ಸಮಾಜ ಸೇವಕ ಬಾಳ್ಳು ಮಲ್ಲಿಕಾರ್ಜುನ್ ದಂಪತಿಗಳಿಗೆ ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿ ಗೌರವ ಸಲ್ಲಿಸಿದರು.

ಭಾನುವಾರ ತಾಲೂಕಿನ ಬಾಳುಪೇಟೆಯ ಕೆಂಚಮ್ಮ ಮಲ್ಲೇಗೌಡ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಆತ್ಮಲೋಕನ ಸಭೆಯಲ್ಲಿ ಮಲ್ಲಿಕಾರ್ಜುನ್ ರಿಗೆ ಅಭಿನಂದನೆ ಸಲ್ಲಿಸಲಾಯಿತು. ಚುನಾವಣೆ ವೇಳೆ ಪ್ರಾಮಾಣಿಕರಾಗಿ ಕಾರ್ಯಕರ್ತರಿಗೆ ಬೆನ್ನೆಲುಬಾಗಿ ನಿಂತು ಸಂಘಟನಾತ್ಮಕವಾಗಿ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವ ಜೊತೆಗೆ ಸಿಮೆಂಟ್ ಮಂಜು ಅವರ ಗೆಲುವಿಗೆ ಸಹಕರಿಸಿದ್ದಾರೆ ಎಂದು ಕಾರ್ಯಕರ್ತರು ಸ್ಮರಿಸಿಕೊಂಡರು.

ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜುನಾಥ್, ಸಕಲೇಶಪುರ ತಾಲೂಕು ಮಂಡಲದ ನಿಕಟಪೂರ್ವ ಅಧ್ಯಕ್ಷ ಪ್ರತಾಪ್, ತಾಲೂಕು ಮಹಿಳಾ ಘಟಕದ ಅಧ್ಯಕ್ಷ ನೇತ್ರಾವತಿ ಮಂಜುನಾಥ್, ಬಾಳ್ಳುಪೇಟೆ ಶಕ್ತಿ ಕೇಂದ್ರದ ಅಧ್ಯಕ್ಷ ರವಿ, ವೆಂಕಟೇಶ್ ಶಿವಕುಮಾರ್ ಸೇರಿದಂತೆ ಮುಂತಾದವರಿದ್ದರು.

RELATED ARTICLES
- Advertisment -spot_img

Most Popular