Saturday, April 12, 2025
Homeಸುದ್ದಿಗಳುಸಕಲೇಶಪುರವಿಶ್ವಕರ್ಮ ಮಹೋತ್ಸವ | ಮಲೆನಾಡು ವೀರಶೈವ ಸಮಾಜದಿಂದ ಗುರುವಂದನೆ ಸಲ್ಲಿಕೆ.

ವಿಶ್ವಕರ್ಮ ಮಹೋತ್ಸವ | ಮಲೆನಾಡು ವೀರಶೈವ ಸಮಾಜದಿಂದ ಗುರುವಂದನೆ ಸಲ್ಲಿಕೆ.

ಸಕಲೇಶಪುರ :- ಭಾನುವಾರ ಪಟ್ಟಣದಲ್ಲಿ ನಡೆದ ವಿಶ್ವಕರ್ಮ ಮಹೋತ್ಸವ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ತಾಲೂಕು ವೀರಶೈವ ಸಮಾಜದಿಂದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಶ್ರೀ ಶ್ರೀ ಶ್ರೀ ಶಿವ ಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರಿಗೆ ಭಕ್ತಿ ಪೂರ್ವಕವಾಗಿ ಗುರುವಂದನೆ ಸಲ್ಲಿಸಿದರು 

ತಾಲೂಕು ಮಲೆನಾಡು ವೀರಶೈವ ಸಮಾಜದ ಮುಖಂಡರು ಕಾರ್ಯಕ್ರಮ ಮೆರವಣಿಗೆಯಲ್ಲಿ ವಿಶ್ವಕರ್ಮ ಸಮಾಜದಿಂದ ನೀಡಿದ ಪೇಟವನ್ನು ಧರಿಸಿ ಎಲ್ಲರ ಜೊತೆ ಹೆಜ್ಜೆ ಹಾಕುತ್ತಾ ವಾದ್ಯದೊಂದಿಗೆ ಕುಣಿದು ವೇದಿಕೆ ಕಾರ್ಯಕ್ರಮದವರೆಗೂ ಮೆರವಣಿಗೆಯಲ್ಲಿ ಸಾಗಿದರು.

 

ಈ ಸಂದರ್ಭದಲ್ಲಿ ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷರಾದ ದೇವರಾಜ್ (ದಿವಾನ್ ), ವಿದ್ಯಾಶಂಕರ್, ಯಡೇಹಳ್ಳಿ ಆರ್ ಮಂಜುನಾಥ್, ಮಾಸುವಳ್ಳಿ ಸಂಗಪ್ಪ, ಜಯರಾಜ್, ಸುರೇಶ್ ನಾಗೇಶ್ ಸೇರಿದಂತೆ ಇನ್ನಿತರರು ಶ್ರೀಗಳ ಆಶೀರ್ವಾದ ಪಡೆದುಕೊಂಡರು

RELATED ARTICLES
- Advertisment -spot_img

Most Popular