Wednesday, January 28, 2026
Homeಸುದ್ದಿಗಳುಸಕಲೇಶಪುರಸಕಲೇಶಪುರ: ಚೆಸ್ಕಾಂ ನಿರ್ಲಕ್ಷಕ್ಕೆ ಮೂರು ಹಸುಗಳ ದಾರುಣ ಸಾವು.

ಸಕಲೇಶಪುರ: ಚೆಸ್ಕಾಂ ನಿರ್ಲಕ್ಷಕ್ಕೆ ಮೂರು ಹಸುಗಳ ದಾರುಣ ಸಾವು.

 

ಸಕಲೇಶಪುರ : ಬಾಳ್ಳುಪೇಟೆ ವಲಯದ ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ಆರೋಗ್ಯವಂತ ಮೂರು ಹಸುಗಳು ಸಾವನಪ್ಪಿರುವ ಘಟನೆ ಗುರುವಾರ ಯಡೇಹಳ್ಳಿ ಗ್ರಾಮದಲ್ಲಿ ನಡೆದಿದೆ.

ಯಡೇಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳ ಹಿಂದೆ ವಿದ್ಯುತ್ ಕಂಬಗಳು ಬಾಗಿರುವ ಬಗ್ಗೆ ಗ್ರಾಮಸ್ಥರು ಇಲಾಖೆಗೆ ತಿಳಿಸಿದ್ದರೂ ಸಹ ನಿರ್ಲಕ್ಷತನ ತೋರಿದ ಪರಿಣಾಮ ಮೇಯಲು ಬಿಟ್ಟಿದ್ದ ಹಸುಗಳು ವಿದ್ಯುತ್ ತಂತಿಯನ್ನು ತುಳಿದು ವಿದ್ಯುತ್ ಪ್ರವಹಿಸಿದ್ದರಿಂದ ಮೂರು ಹಸುಗಳು ಸ್ಥಳದಲ್ಲಿ ಸಾವನ್ನಪ್ಪಿವೆ.

ಗ್ರಾಮದ ದಿನೇಶ್ ಎಂಬುವರ ಎರಡು ಹಸುಗಳು ಹಾಗೂ ಬಸವರಾಜ್ ಎಂಬುರವರ ಒಂದು ಹಸು ಸಾವನ್ನಪ್ಪಿದೆ.

ಚೆಸ್ಕಾಂ ಇಲಾಖೆಯ ನಿರ್ಲಕ್ಷಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

RELATED ARTICLES
- Advertisment -spot_img

Most Popular