Saturday, April 19, 2025
Homeಸುದ್ದಿಗಳುಸಕಲೇಶಪುರಕರ್ನಾಟಕ ಬಂದ್ ಗೆ ಸಕಲೇಶಪುರದಲ್ಲಿ ಉತ್ತಮ ಪ್ರತಿಕ್ರಿಯೆ: ಪಟ್ಟಣ ಸಂಪೂರ್ಣ ಬಂದ್

ಕರ್ನಾಟಕ ಬಂದ್ ಗೆ ಸಕಲೇಶಪುರದಲ್ಲಿ ಉತ್ತಮ ಪ್ರತಿಕ್ರಿಯೆ: ಪಟ್ಟಣ ಸಂಪೂರ್ಣ ಬಂದ್

ಕರ್ನಾಟಕ ಬಂದ್ ಗೆ ಸಕಲೇಶಪುರದಲ್ಲಿ ಉತ್ತಮ ಪ್ರತಿಕ್ರಿಯೆ: ಪಟ್ಟಣ ಸಂಪೂರ್ಣ ಬಂದ್

ಸಕಲೇಶಪುರ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆದಿದ್ದ ಪ್ರತಿಭಟನೆಗೆ ಪಟ್ಟಣದಲ್ಲಿ ಉತ್ತಮ ಬೆಂಬಲ ಕಂಡು ಬಂದಿತು. ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಅಂಚೆ ಕಚೇರಿ, ಬ್ಯಾಂಕ್ ಗಳಿಗೆ ಹೋಗಿ ಬಂದ್ ಗೆ ಸಹಕಾರ ನೀಡುವಂತೆ ಮನವಿ ಮಾಡುವುದು ಕಂಡು ಬಂದಿತು. ಒಟ್ಟಾರೆಯಾಗಿ ಕರ್ನಾಟಕ ಬಂದ್ ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬಂದಿತು. ಪಟ್ಟಣದ ಹೊರ ವಲಯಗಳಲ್ಲಿ ಮಾತ್ರ ದಿನಸಿ ಅಂಗಡಿಗಳ ಮಾಲಿಕರು ಕದ್ದುಮುಚ್ಚಿ ವ್ಯಾಪಾರ ಮಾಡುವುದು ಕಂಡು ಬಂದಿತು. ಯಾವುದೆ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗಿಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.

RELATED ARTICLES
- Advertisment -spot_img

Most Popular