ಕುದರಂಗಿ ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆದ ಶಾಸಕ ಸಿಮೆಂಟ್ ಮಂಜು.
ಸಕಲೇಶಪುರ: ತಾಲೂಕಿನಲ್ಲಿರುವ ಇತಿಹಾಸ ನೆನಪಿಸುವ ಹಲವು ದೇವಾಲಯಗಳಲ್ಲಿ ಸುಳ್ಳಕ್ಕಿ ಗ್ರಾಮದ ಕುದರಂಗಿ ಶ್ರೀ ವೀರಭದ್ರ ಸ್ವಾಮಿಯ ದರ್ಶನವನ್ನು ಶಾಸಕ ಸಿಮೆಂಟ್ ಮಂಜು ಪಡೆದರು.
ಬುಧುವಾರ ಕುಟುಂಬ ಸಮೇತರಾಗಿ ದೇವರ ದರ್ಶನ ಪಡೆದು ಮಾತನಾಡಿದರು,ಸ್ವಾಮಿ ಯವರ ರಥೋತ್ಸವ ದ ವೇಳೆ ಅನ್ಯ ಕಾರ್ಯ ನಿಮಿತ್ತ ಬರಲು ಸಾಧ್ವಾಗಿರಲಿಲ್ಲ ಹಾಗಾಗಿ ಇಂದು ದೇವರ ದರ್ಶನ ಪಡೆದಿದ್ದೇನೆ.ಶ್ರೀ ಸ್ವಾಮಿಯವರ ಕೃಪೆಯಿಂದ ಕ್ಷೇತ್ರದ ಜನರಿಗೆ ಒಳಿತನ್ನು ಉಂಟುಮಾಡಲಿ, ಕಾಲ ಕಾಲಕ್ಕೆ ಮಳೆ ಬೆಳೆಯಾಗಲಿ ಜನರಿಗೆ ಸಮೃದ್ಧ ಜೀವನ ನಡೆಸಲು ಎಲ್ಲಾ ರೀತಿಯ ಸೌಕರ್ಯ ನೀಡಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು. ಇಲ್ಲಿಗೆ ಆಗಮಿಸುವ ಭಕ್ತರು ಕಷ್ಟ ಕಾರ್ಪಣ್ಯಗಳು ನಿವಾರಣೆ ಯಾಗುತ್ತೇವೆ ಎಂಬ ಭಾವನೆಯನ್ನು ಹೊಂದಿದ್ದಾರೆ ಹಾಗಾಗಿ ಕುದರಂಗಿ ವೀರಭದ್ರೇಶ್ವರ ಸ್ವಾಮಿಯ ಬಗ್ಗೆ ಭಕ್ತರು ಅಪಾರ ನಂಬಿಕೆಯನ್ನು ಇಟ್ಟಿದ್ದಾರೆ ಎಂದರು.ಇದೆ ವೇಳೆ ಶಾಸಕರು ದೇಗುಲದ ಅಭಿವೃದ್ಧಿಯ ಬಗ್ಗೆ ಮಾಹಿತಿ ಪಡೆದರು.ನಿರ್ಮಾಣ ವಾಗುತ್ತಿರುವ ದಾಸೋಹ ಭವನದ ಮುಂದುವರೆದ ಕಾಮಗಾರಿಯ ವೆಚ್ಚಕ್ಕಾಗಿ ಶಾಸಕರ ಅನುದಾನದಲ್ಲಿ ರೂ 5 ಲಕ್ಷ ನೀಡುವುದಾಗಿ ತಿಳಿಸಿದರು.ಇದೆ ವೇಳೆ ದೇವಸ್ಥಾನದ ಸಮಿತಿ ವತಿಯಿಂದ ಅವರನ್ನು ಸತ್ಕರಿಸಿದರು.