ಜಾಯಿಂಟ್ ವೀಲ್ ಹಾಗೂ ಕೊಲಂಬಸ್ ಮನೋರಂಜನೆಗೆ ಮುಂದುವರೆದ ಹೈಕೋರ್ಟ್ ತಡೆಯಾಜ್ಞೆ :
ಉಳಿದಂತೆ ಜಾತ್ರೆಯಲ್ಲಿ ಯಥಾ ಸ್ಥಿತಿ ಮುಂದುವರಿಕೆ
ಸಕಲೇಶಪುರ : ಸಾರ್ವಜನಿಕರಿಗೆ ಸುರಕ್ಷತೆ ಇಲ್ಲಾ ಎಂಬ ನೆಪದ ಕೆಲವರು ಈ ಬಾರಿ ಸಕಲೇಶಪುರ ಪಟ್ಟಣದಲ್ಲಿ ನಡೆಯುತ್ತಿರುವ ದನಗಳ ಜಾತ್ರೆ ಹಾಗೂ ವಸ್ತು ಪ್ರದರ್ಶನದಲ್ಲಿ ಜಾಯಿಂಟ್ ವೀಲ್ ಹಾಗೂ ಕೊಲಂಬಸ್ ಚಾಲನೆ ಮಾಡಬಾರದೆಂದು ಕೆಲವರು ಹೈಕೋರ್ಟಿನಿಂದ ತಡೆಯಾಜ್ಞೆ ತಂದಿದ್ದು ಈ ಹಿನ್ನೆಲೆಯಲ್ಲಿ ಪ್ರಕರಣ ಮತ್ತೊಮ್ಮೆ ಸೋಮವಾರ ಹೈಕೋರ್ಟ್ ನಲ್ಲಿ ನ್ಯಾಯಾಧೀಶ ಸಂಜಯ್ ಗೌಡ ರವರ ಮುಂದೆ ಮತ್ತೊಮ್ಮೆ ವಾದ ವಿವಾದ ನಡೆಯಿತು. ಆದರೆ ಪುರಸಭೆ ಪರ ವಕೀಲರು ಪ್ರಬಲವಾಗಿ ವಾದ ಮಂಡಿಸಲು ವಿಫಲರಾದ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಜಾಯಿಂಟ್ ವೀಲ್ ಹಾಗೂ ಕೊಲಂಬಸ್ಗೆ ಹೈಕೋರ್ಟ್ ತಡೆಯಾಜ್ಞೆ ಮುಂದುವರೆದಿರುತ್ತದೆ. ಈ ಹಿನ್ನೆಲೆಯಲ್ಲಿ ಪುರಸಭೆ ನಿರ್ಲಕ್ಷ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ