Sunday, April 20, 2025
Homeಸುದ್ದಿಗಳುಸಕಲೇಶಪುರಕೆರೆಗೆ ಕಾಲುಜಾರಿ ಬಿದ್ದು ವ್ಯಕ್ತಿ ದುರ್ಮರಣ: ಅಗ್ನಿಶಾಮಕ ದಳದಿಂದ  ಕಾರ್ಯಚರಣೆ.

ಕೆರೆಗೆ ಕಾಲುಜಾರಿ ಬಿದ್ದು ವ್ಯಕ್ತಿ ದುರ್ಮರಣ: ಅಗ್ನಿಶಾಮಕ ದಳದಿಂದ  ಕಾರ್ಯಚರಣೆ.

ಕೆರೆಗೆ ಕಾಲುಜಾರಿ ಬಿದ್ದು ವ್ಯಕ್ತಿ ದುರ್ಮರಣ: ಅಗ್ನಿಶಾಮಕ ದಳದಿಂದ  ಕಾರ್ಯಚರಣೆ.

ಸಕಲೇಶಪುರ : ಕೆಲಸಕ್ಕೆ ಎಂದು ಹೋಗಿದ್ದ ವೇಳೆ ಕೆರೆಯ ದಡದ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

 ತಾಲೂಕಿನ ಬೆಳಗೋಡು ಹೋಬಳಿ ಮೆಣಸಮಕ್ಕಿ ಗ್ರಾಮದ ನಂಜುಂಡ (೪೪) ಮೃತಪಟ್ಟ ದುರ್ದೈವಿಯಾಗಿದ್ದಾರೆ.

 ಮಂಗಳವಾರ ಸಂಜೆ ಮನೆಗೆ ಹಿಂದಿರುಗುವಾಗ ಎಂ. ಬಿ ರಾಜಶೇಖರ್ ರವರ ಗದ್ದೆಯ  ಕೆರೆ ಬಳಿ ನಡೆದುಕೊಂಡು ಬರುತ್ತಿರುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿರುವ ನಂಜುಂಡ ರವರ ಮೃತದೇಹವನ್ನು ಹೊರ ತೆಗೆಯಲು ಅಗ್ನಿಶಾಮಕ ದಳದವರು ಕತ್ತಲೆಯಲ್ಲೂ   ಹರಸಾಹಸ ಪಟ್ಟು ಮೃತದೇಹವನ್ನು ಕೆರೆಯಿಂದ ಹೊರ ತೆಗೆಯಲು ಯಶಸ್ವಿಯಾದರು. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

RELATED ARTICLES
- Advertisment -spot_img

Most Popular