Saturday, April 12, 2025
Homeಸುದ್ದಿಗಳುಸಕಲೇಶಪುರಬಾಳಿ ಬೆಳಗುವ ಮೊದಲೆ ಹೃದಯಾಘಾತದಿಂದ  ಮೃತ ಪಟ್ಟ ಯುವಕ

ಬಾಳಿ ಬೆಳಗುವ ಮೊದಲೆ ಹೃದಯಾಘಾತದಿಂದ  ಮೃತ ಪಟ್ಟ ಯುವಕ

ಬಾಳಿ ಬೆಳಗುವ ಮೊದಲೆ ಹೃದಯಾಘಾತದಿಂದ  ಮೃತ ಪಟ್ಟ ಯುವಕ…!!

ಸಕಲೇಶಪುರ:: ತಾಲೂಕಿನ ಬೆಳಗೋಡು ಹೋಬಳಿ ಯಡೇಹಳ್ಳಿ ಗ್ರಾಮದ ಚಂದನ್ (20) ಎಂಬ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆಂದು ಹೇಳಲಾಗುತ್ತಿದೆ‌‌. ಮನೆಯಲ್ಲಿದ್ದಾಗ ಅನಾರೋಗ್ಯಕ್ಕೆ ತುತ್ತಾಗಿ ಕುಸಿದು ಬಿದ್ದಿದ್ದ  ಯುವಕನನ್ನು ಪಟ್ಟಣದ ಕ್ರಾಫರ್ಡ್ ಕರೆತರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಮೃತನು ಗ್ರಾಮದ ಬಸವರಾಜಯ್ಯ ಹಾಗೂ ಸುಧಾ ಎನ್ನುವರ ಪುತ್ರನಾಗಿದ್ದು ಹಾಸನದ ಕಾಲೇಜೊಂದರಲ್ಲಿ ದ್ವಿತೀಯಾ ವರ್ಷದ ಪದವಿ ಓದುತ್ತಿದ್ದನೆಂದು ತಿಳಿದು ಬಂದಿದೆ.ಮೇಲ್ನೋಟಕ್ಕೆ ಹೃದಯ ಸ್ತಂಭನ ಉಂಟಾಗಿದೆಯೆಂದು ವೈದ್ಯರು ಹೇಳಿದ್ದು ಮರಣೋತ್ತರ ಪರೀಕ್ಷೆ ನಂತರ ಸಾವಿನ ನಿಖರ ಕಾರಣ ತಿಳಿದುಬರಲಿದೆ.

RELATED ARTICLES
- Advertisment -spot_img

Most Popular