Saturday, April 19, 2025
Homeಕ್ರೈಮ್ಸಕಲೇಶಪುರ : ಪಾದಚಾರಿಗೆ ಕಾರು ಡಿಕ್ಕಿ : ಗಾಯಳು ಅರೋಗ್ಯ ಸ್ಥಿತಿ ಗಂಭೀರ

ಸಕಲೇಶಪುರ : ಪಾದಚಾರಿಗೆ ಕಾರು ಡಿಕ್ಕಿ : ಗಾಯಳು ಅರೋಗ್ಯ ಸ್ಥಿತಿ ಗಂಭೀರ

ಸಕಲೇಶಪುರ : ಪಾದಚಾರಿಗೆ ಕಾರು ಡಿಕ್ಕಿ : ಗಾಯಳು ಅರೋಗ್ಯ ಸ್ಥಿತಿ ಗಂಭೀರ

ಬಾಳ್ಳುಪೇಟೆಯ ಜೆಪಿ ನಗರ ಸಮೀಪ ಘಟನೆ

ಸಕಲೇಶಪುರ : ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊಬ್ಬರಿಗೆ ಕಾರು ಡಿಕ್ಕಿಯಾಗಿ ವ್ಯಕ್ತಿಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವ ಘಟನೆ ನೆಡೆದಿದೆ.

ತಾಲೂಕಿನ ಬಾಳ್ಳುಪೇಟೆಯ ಜೆಪಿ ನಗರದಲ್ಲಿ ಗುರುವಾರ ಸಂಜೆ ಘಟನೆ ಜರುಗಿದ್ದು ರಸ್ತೆಯ ಎಡ ಬದಿಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ ಓಂ ನಗರದ ನಿವಾಸಿ ಶಾಂತಪ್ಪ(41) ಗಂಭೀರವಾಗಿ ಗಾಯಗೊಂಡಿರುವ ದುರ್ದೈವಿಯಾಗಿದ್ದಾರೆ.

 ತಮಿಳುನಾಡು ಮೂಲದ ಸ್ವಿಫ್ಟ್ ಕಾರ್ ಸಕಲೇಶಪುರದಿಂದ ಹಾಸನ ಕಡೆಗೆ ತೆರಳುತ್ತಿತ್ತು. ಅತಿ ವೇಗ ಹಾಗೂ ಅಜಾರೂಗತೆಯಿಂದ ಪಾದಚಾರಿಗೆ ಡಿಕ್ಕಿ ಮಾಡಿದ ಕಾರು ಚಾಲಕ ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗುತ್ತಿದ್ದನ್ನು ನೋಡಿದ ಪತ್ರಕರ್ತ ನವೀನ್ ಸದಾ ರವರು ಕಾರನ್ನು ಬೆನ್ನಟ್ಟಿದ್ದಾರೆ. ಇದನ್ನು ಕಂಡ ಅಪಘಾತ ಮಾಡಿದ ಕಾರು ಚಾಲಕ ಪಾಳ್ಯ ಗ್ರಾಮದ ಸಮೀಪ ರಸ್ತೆ ಬದಿ ಕಾರು ನಿಲ್ಲಿಸಿ ಪರಾರಿಯಾಗಿದ್ದಾನೆ.

 ಸದ್ಯ 112 ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES
- Advertisment -spot_img

Most Popular