Sunday, April 20, 2025
Homeಸುದ್ದಿಗಳುಸಕಲೇಶಪುರಅರಣ್ಯ ಅಧಿಕಾರಿಗಳ ಆರೋಗ್ಯ ವಿಚಾರಿಸಿದ ಶಾಸಕ ಎಚ್ ಕೆ ಕುಮಾರಸ್ವಾಮಿ.

ಅರಣ್ಯ ಅಧಿಕಾರಿಗಳ ಆರೋಗ್ಯ ವಿಚಾರಿಸಿದ ಶಾಸಕ ಎಚ್ ಕೆ ಕುಮಾರಸ್ವಾಮಿ.

ಅರಣ್ಯ ಅಧಿಕಾರಿಗಳ ಆರೋಗ್ಯ ವಿಚಾರಿಸಿದ ಶಾಸಕ ಎಚ್ ಕೆ ಕುಮಾರಸ್ವಾಮಿ.

 ಕಾಡ್ಗಿಚ್ಚಿನಿಂದ ಬೆಂಕಿ ತಗುಲಿ ತೀವ್ರ ಸ್ವರೂಪದ ಗಾಯಗಳಾಗಿ ಬೆಂಗಳೂರು ಆಸ್ಪತ್ರೆಗೆ ಸೇರಿದ್ದ ಸುಂದರೇಶ್ ಹಾಗೂ ಮಂಜುನಾಥ್.

 ಸುಂದರೇಶ್ ಸ್ಥಿತಿ ಚಿಂತಾಜನಕವಾಗಿದ್ದು ವೈದ್ಯರು ತೀವ್ರ ನಿಗ ವಹಿಸಿದ್ದಾರೆ.

ಸಕಲೇಶಪುರ : ನೆನ್ನೆ ತಾಲೂಕಿನ ಕಾಡುಮನೆ ಸಮೀಪ ಅರಣ್ಯದಲ್ಲಿ ಬಿದ್ದಿದ್ದ ಬೆಂಕಿ ನಂದಿಸಲು ತೆರಳಿದ್ದ ಡಿ. ಆರ್. ಎಫ್ ಓ ಮಂಜುನಾಥ್, ಹಾಗೂ ಸುಂದರೇಶ್ ಸೇರಿದಂತೆ ನಾಲ್ವರಿಗೆ ಬೆಂಕಿ ತಗುಲಿ ಗಾಯಗಳಾಗಿತ್ತು.

 ಫಾರೆಸ್ಟರ್ ಸುಂದರೇಶ್ ಹಾಗೂ ಡಿ ಆರ್ ಎಫ್ ಮಂಜುನಾಥ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ನೆನ್ನೆ ರಾತ್ರಿ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

 ಇಂದು ಶಾಸಕ ಎಚ್ ಕೆ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

 ಫಾರೆಸ್ಟರ್ ಸುಂದರೇಶ್ ಅವರ ಆರೋಗ್ಯ ಸ್ಥಿತಿ ತೀರಾ ಚಿಂತಾ ಜನಕವಾಗಿದ್ದು ಆಸ್ಪತ್ರೆ ವೈದ್ಯರು ತೀವ್ರ ನಿಗ ಇಟ್ಟಿದ್ದಾರೆ. 

RELATED ARTICLES
- Advertisment -spot_img

Most Popular