Sunday, April 20, 2025
Homeಸುದ್ದಿಗಳುBreaking News : ಹಾಸನ ಡಿ.ಎಫ್.ಓ ಬಸವರಾಜ್ ಮೈಸೂರಿಗೆ ವರ್ಗಾವಣೆ 

Breaking News : ಹಾಸನ ಡಿ.ಎಫ್.ಓ ಬಸವರಾಜ್ ಮೈಸೂರಿಗೆ ವರ್ಗಾವಣೆ 

Breaking News : ಹಾಸನ ಡಿ.ಎಫ್.ಓ ಬಸವರಾಜ್ ಮೈಸೂರಿಗೆ ವರ್ಗಾವಣೆ

ಸಕಲೇಶಪುರ: ಕಾಡಾನೆ ಸಮಸ್ಯೆಯನ್ನು ಬಗೆಹರಿಸಲು ಗಂಭೀರವಾಗಿ ಶ್ರಮಿಸಿದ್ದ ಹಾಸನ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್ ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ. ಇವರ ಸ್ಥಾನಕ್ಕೆ ಬೆಂಗಳೂರಿನ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್‌ನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಹರೀಶ್‌ರವರನ್ನು ಕರ್ತವ್ಯಕ್ಕೆ ಸರ್ಕಾರ ನಿಯೋಜಿಸಿದೆ. ಕೆ.ಹರೀಶ್ ಈ ಹಿಂದೆ ಆಲೂರಿನಲ್ಲಿ ಎ.ಸಿ.ಎಫ್ ಆಗಿ ಕಾರ್ಯನಿರ್ವಹಿಸಿದ್ದರು. ಕಳೆದ 2 ವರ್ಷಗಳಿಂದ ಹಾಸನ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಬಸವರಾಜ್ ಇತ್ತೀಚೆಗೆ ಕರ್ತವ್ಯ ನಿರ್ಲಕ್ಷದ ಹಿನ್ನೆಲೆಯಲ್ಲಿ ಸಕಲೇಶಪುರದ ವಲಯ ಅರಣ್ಯಾಧಿಕಾರಿ ಶಿಲ್ಪಾ ಸೇರಿದಂತೆ ಇತರೆ ಮೂವರು ಸಿಬ್ಬಂದಿಗಳನ್ನು ಅಮಾನತ್ತು ಮಾಡಿದ್ದರಿಂದ ಕೆಲವು ದಲಿತ ಪರ ಸಂಘಟನೆಗಳ ವತಿಯಿಂದ ಇವರ ವಿರುದ್ದ ಪ್ರತಿಭಟನೆ ಮಾಡಲಾಗಿತ್ತು.

RELATED ARTICLES
- Advertisment -spot_img

Most Popular