ಸಕಲೇಶಪುರ : ಬಾಳ್ಳುಪೇಟೆಯ ಬಸವೇಶ್ವರ ನಗರದಲ್ಲಿ ಕಾಡಾನೆ ಓಡಾಟ : ಮನೆ ಕಾಂಪೌಂಡ್ ಒಡೆದು ಹಾಕಿದ ಓಲ್ಡ್ ಮಕ್ನ
ಸಕಲೇಶಪುರ :- ಸದ್ಯ ಸಕಲೇಶಪುರ ತಾಲೂಕಿನಲ್ಲಿ ಒಂಟಿ ಕಾಡಾನೆಯೊಂದು ಸಾರ್ವಜನಿಕರ ನಿದ್ದೆಗೆಡಿಸಿದ್ದು ರಾತ್ರಿ ವೇಳೆ ವಸತಿ ಪ್ರದೇಶಗಳಿಗೆ ನುಗ್ಗುವ ಚಾಳಿಯನ್ನು ಮುಂದುವರಿಸಿದೆ.
ಕಳೆದ ರಾತ್ರಿ ಬಾಳ್ಳುಪೇಟೆಯ ಬಸವೇಶ್ವರ ನಗರದಲ್ಲಿ ಓಲ್ಡ್ ಮಕ್ನ ಎಂಬ ಕಾಡಾನೆ ಸಂಚರಿಸಿ ಗ್ರಾಮದ ಅಸ್ಲಂ ಎಂಬುವವರ ಮನೆಯ ಕಾಂಪೌಂಡನ್ನು ಒಡೆದುಹಾಕಿ ಬೆಳೆದಿದ್ದ ಬಾಳೆಯನ್ನು ನಾಶಪಡಿಸಿದೆ.
ಕಳೆದ ಆರು ತಿಂಗಳ ಹಿಂದೆ ಉದೇವಾರ ಸಮೀಪ ಕಾಫಿ ತೋಟ ಒಂದರಲ್ಲಿ ಸೆರೆಹಿಡಿದಿದ್ದ ಈ ಆನೆಯನ್ನು ದೂರದ ಮಲೆ ಮಹದೇಶ್ವರ ಬೆಟ್ಟಕ್ಕೆ ಬಿಟ್ಟು ಬಂದಿದ್ದರು. ಆದರೂ ಸಕಲೇಶಪುರಕ್ಕೆ ಬಂದು ಓಡಾಡುತ್ತಾ ಜನರ ನಿದ್ದೆಗೆಡಿಸಿದೆ.
ತೀವ್ರ ಉಪಟಳ ನೀಡುತ್ತಿರುವ ಈ ಕಾಡಾನೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.