Friday, June 6, 2025
Homeಸುದ್ದಿಗಳುಸಕಲೇಶಪುರಸಂವಿಧಾನವನ್ನು ಮೊದಲು ಪ್ರತಿಯೊರ್ವರ ಅರ್ಥ ಮಾಡಿಕೊಳ್ಳಬೇಕು: ಮಾಜಿ ಸಚಿವ ಹಾಗೂ ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ...

ಸಂವಿಧಾನವನ್ನು ಮೊದಲು ಪ್ರತಿಯೊರ್ವರ ಅರ್ಥ ಮಾಡಿಕೊಳ್ಳಬೇಕು: ಮಾಜಿ ಸಚಿವ ಹಾಗೂ ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್

ಸಂವಿಧಾನವನ್ನು ಮೊದಲು ಪ್ರತಿಯೊರ್ವರ ಅರ್ಥ ಮಾಡಿಕೊಳ್ಳಬೇಕು: ಮಾಜಿ ಸಚಿವ ಹಾಗೂ ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್

ಸಕಲೇಶಪುರ: ಪರಸ್ಪರರಲ್ಲಿ ಸಹೋದರತೆ ಭಾವನೆ ಹುಟ್ಟಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ವತಿಯಿಂದ ಭೀಮ ಶಕ್ತಿ ಸಂಗಮ ಕಾರ್ಯಕ್ರಮವನ್ನು ಎಲ್ಲೆಡೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಹೇಳಿದರು.

    ಪಟ್ಟಣದ ಲಕ್ಷ್ಮೀಪುರಂ ಬಡಾವಣೆಯಲ್ಲಿರುವ ಶಾಸಕ ಸಿಮೆಂಟ್ ಮಂಜುರವರ ಮನೆಯ ಆವರಣದಲ್ಲಿ ಸಂವಿಧಾನ ಸನ್ಮಾನ ಅಭಿಯಾನ ಹಾಗೂ ಭೀಮ ಶಕ್ತಿ ಸಂಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಸಂವಿಧಾನ ಸನ್ಮಾನ ಕಾರ್ಯಕ್ರಮ ಅಭಿಯಾನದ ಅಂಗವಾಗಿ ಭೀಮ ಶಕ್ತಿ ಸಂಗಮ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ಸಂಸದರು ಹಾಗೂ ಶಾಸಕರ ಮನೆಯ ಆವರಣದಲ್ಲಿ ಸುಮಾರು 50ರಿಂದ 100 ದಲಿತ ಕುಟುಂಬಗಳನ್ನು ಸೇರಿಸಿ ಸಾಮೂಹಿಕ ಭೋಜನ ಮಾಡಿ ಸಂವಿಧಾನದ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತಿದೆ. ಇಂದು ಸಂವಿಧಾನದ ಪೀಠಿಕೆಯನ್ನು ಎಲ್ಲೆಡೆ ಓದಲಾಗುತ್ತಿದೆ ಆದರೆ ಇದು ಶಾಸ್ತ್ರೋತಕವಾಗಿ ಆಗಬಾರದು ಸಂವಿಧಾನದಲ್ಲಿ ಏನಿದೆ ಎಂಬುದನ್ನು ನಾವು ಮೊದಲಿಗೆ  ಅರ್ಥೈಸಿಕೊಳ್ಳಬೇಕು.  ಸಂವಿಧಾನ ರಚನೆ ಮಾಡಲು ಒಂದು ಸಮಿತಿ ಮಾಡಲಾಗಿದ್ದು ಅದರ ನೇತೃತ್ವವನ್ನು ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್ ವಹಿಸಿಕೊಂಡಿದ್ದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಕರಡು ಸಮಿತಿಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಸುಮಾರು ಎರಡು ವರ್ಷ 11 ತಿಂಗಳು 17 ದಿನಗಳ ಕಾಲ ಅಧ್ಯಯನ ಮಾಡಿ  ಅವರು ರಚಿಸಿದ ಸಂವಿಧಾನವನ್ನು ರಚನಾ ಸಭೆಯ ಮುಂದೆ ಮಂಡಿಸಿ ಮಾಡಿ ವಿರೋ‘ ಚರ್ಚೆಗಳಿಗೆ ಉತ್ತರವನ್ನು ಕೊಟ್ಟು ನವೆಂಬರ್ 26 1949ರಲ್ಲಿ ಈ ಸಂವಿಧಾನ ಅಂಗೀಕಾರ ಆಗೋ ಹಾಗೆ ಮಾಡಿದರು.  ಸಂವಿಧಾನದ ಮೂಲಕ ಎಲ್ಲಾರಿಗೂ ಸಮಾನತೆ ಸಿಕ್ಕಿ ನ್ಯಾಯ ದೊರಕಿದರೆ ಸೋದರತ್ವ ಬರುತ್ತದೆ.  ಈ ನಿಟ್ಟಿನಲ್ಲಿ ಸಹೋದರತ್ವವನ್ನು ಹುಟ್ಟು ಹಾಕಲು ಭೀಮ ಶಕ್ತಿ ಸಂಗಮ ಮಾಡಲಾಗುತ್ತಿದೆ. ನಾವೆಲ್ಲಾರು ಒಂದೇ ಉದರದಲ್ಲಿ ಹುಟ್ಟಿದವರು ಅಂದರೆ ತಾಯಿಯ  ಗರ್ಭದಲ್ಲಿ ಹುಟ್ಟಿದವರು ಬೇರೆ ಬೇರೆ ವ್ಯಕ್ತಿಗಳ ಗರ್ಭ ಬೇರೆ ಇರಬಹುದು ಆದರೆ ಗರ್ಭ ಮಾತ್ರ ಒಂದೇ  ಹಾಗೂ ಇದೇ ರೀತಿ ಪ್ರತಿಯೋರ್ವರಲ್ಲೂ ಹರಿಯುವ ರಕ್ತದ ಗುಂಪು ಬೇರೆ ಇರಬಹುದು ಆದರೆ ಬಣ್ಣ ಒಂದೆ, ತುರ್ತುಸಂಧರ್ಭದಲ್ಲಿ  ರಕ್ತದ ಅವಶ್ಯಕತೆಯಿದ್ದಾಗ ಜಾತಿ ಧರ್ಮಗಳನ್ನು ನೋಡದೆ ರಕ್ತ ಪಡೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ನಾವೆಲ್ಲಾರು ರಾಷ್ಟ್ರೀಯತೆ ವಾದಿಗಳಾಗಿ ದೇಶದ ಏಳಿಗೆಗಾಗಿ  ಒಗ್ಗೂಡಿ ಶ್ರಮಿಸಬೇಕಾಗಿದೆ ಎಂದರು.

  ಬಿಜೆಪಿ ರಾಜ್ಯ ಎಸ್.ಸಿ ಮೋರ್ಚಾ ಅಧ್ಯಕ್ಷ ಹಾಗೂ ಶಾಸಕ ಸಿಮೆಂಟ್ ಮಂಜು ಮಾತನಾಡಿ ಇಂದು ಸಂವಿಧಾನ ಸನ್ಮಾನ ಕಾರ್ಯಕ್ರಮ ಹಾಗೂ ಭೀಮ ಶಕ್ತಿ ಸಂಗಮ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಮಾಡಲಾಗುತ್ತಿದೆ. ಭೀಮ ಬಂಧುಗಳು ಒಂದೆ ರೀತಿಯ ಯೋಚನಾ ಲಹರಿಯಿಂದ ಹೊರ ಬಂದು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಲು ಮುಂದಿನ ದಿನಗಳಲ್ಲಿ ಮುಂದಾಗಬೇಕೆಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಶಾಸಕ ಸಿಮೆಂಟ್ ಮಂಜುರವರು ಮನೆಯಲ್ಲಿ ಎನ್.ಮಹೇಶ್‌ರವರೊಡನೆ ಹಬ್ಬದ ಊಟವನ್ನು ಪೌರ ಕಾರ್ಮಿಕರು ಹಾಗೂ ಭೀಮ ಬಂಧುಗಳ ಜೊತೆ ಸೇವಿಸಿದರು.ಶಾಸಕರ ಧರ್ಮಪತ್ನಿ ಪ್ರತಿಭಾ ಮಂಜುನಾಥ್ ಪ್ರತಿಯೋರ್ವರಿಗೂ ಊಟದ ಆತಿಥ್ಯ ನೀಡಿದರು. 

  ಈ ಸಂಧರ್ಭದಲ್ಲಿ ಬಿಜೆಪಿ ಎಸ್.ಸಿ ಮೋರ್ಚಾ ತಾಲೂಕು ಅಧ್ಯಕ್ಷ ಸ್ಟೀವನ್ ಪ್ರಕಾಶ್, ಪುರಸಭಾ ಸದಸ್ಯ ಪ್ರದೀಪ್,  ಹೆತ್ತೂರು ಗ್ರಾ.ಪಂ ಅಧ್ಯಕ್ಷ ನಾಗರಾಜ್, ಗ್ರಾ.ಪಂ ಸದಸ್ಯ ಸುದರ್ಶನ್ ವಳಲಹಳ್ಳಿ, ಗುರು ಪ್ರಶಾಂತ್,ತ್ಯಾಗರಾಜ್, ರಾಜಶೇಖರ್ ದೇವಾಲದಕೆರೆ, ಮಾಜಿ ಬಿಜೆಪಿ ತಾಲೂಕು ಅಧ್ಯಕ್ಷ ರಾಜ್‌ಕುಮಾರ್ , ಶರತ್ ಸೇರಿದಂತೆ ಇತರರು ಹಾಜರಿದ್ದರು. 

RELATED ARTICLES
- Advertisment -spot_img

Most Popular