Sunday, April 20, 2025
Homeಸುದ್ದಿಗಳುಸಕಲೇಶಪುರರಾತ್ರೋರಾತ್ರಿ ಹಳೇ ಸೇತುವೆಯ ಅವ್ಯವಸ್ಥೆ ಹಾಗೂ ಗುಂಡಿ ಮುಚ್ಚುವ ಕಾಮಗಾರಿ ವೀಕ್ಷಿಸಿದ ಶಾಸಕ ಸಿಮೆಂಟ್ ಮಂಜು

ರಾತ್ರೋರಾತ್ರಿ ಹಳೇ ಸೇತುವೆಯ ಅವ್ಯವಸ್ಥೆ ಹಾಗೂ ಗುಂಡಿ ಮುಚ್ಚುವ ಕಾಮಗಾರಿ ವೀಕ್ಷಿಸಿದ ಶಾಸಕ ಸಿಮೆಂಟ್ ಮಂಜು

ರಾತ್ರೋರಾತ್ರಿ ಹಳೇ ಸೇತುವೆಯ ಅವ್ಯವಸ್ಥೆ ಹಾಗೂ ಗುಂಡಿ ಮುಚ್ಚುವ ಕಾಮಗಾರಿ ವೀಕ್ಷಿಸಿದ ಶಾಸಕ ಸಿಮೆಂಟ್ ಮಂಜು

ಸಕಲೇಶಪುರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 75 ಹೇಮಾವತಿ ಸೇತುವೆ ಸಮೀಪ ಗುಂಡಿ ಬಿದ್ದಿದ್ದ ಹೆದ್ದಾರಿಯನ್ನು ಶಾಸಕ ಸಿಮೆಂಟ್ ಮಂಜುರವರ ಮನವಿ ಮೇರೆಗೆ ತಮ್ಮ ವ್ಯಾಪ್ತಿಗೆ ಬರದಿದ್ದರು ಸಹ ತಾತ್ಕಾಲಿಕವಾಗಿ ಗುಂಡಿ ಮುಚ್ಚಿಸಿರುವುದು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ. ಈ ಸಂಧರ್ಭದಲ್ಲಿ ಸಿಮೆಂಟ್ ಮಂಜುರವರು ದುಸ್ಥಿಯಲ್ಲಿರುವ ಹಳೆ ಹೇಮಾವತಿ ಸೇತುವೆಯನ್ನು ಸಹ ವೀಕ್ಷಿಸಿದರು. ನಂತರ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಹೇಮಾವತಿ ಸೇತುವೆ ಬಳಿ ಬಿದ್ದಿದ್ದ ಗುಂಡಿಗಳನ್ನು ತಾತ್ಕಾಲಿಕವಾಗಿ ಲೋಕೋಪಯೋಗಿ ಇಲಾಖೆಯವರಿಗೆ ಮನವಿ ನೀಡಿ ಮುಚ್ಚಿಸಲಾಗಿದೆ.ಮುಂದಿನ‌ ದಿನಗಳಲ್ಲಿ ಸೂಕ್ತ ಅನುದಾನ ಪಟ್ಟಣ ವ್ಯಾಪ್ತಿಯ ಮುಖ್ಯ ರಸ್ತೆಯನ್ನು ಮರುಡಾಂಬರಿಕರಣ ಮಾಡಿಸಲಾಗುವುದು ಹಾಗೂ ಹಳೆ ಹೇಮಾವತಿ ಸೇತುವೆಯ ಅವ್ಯವಸ್ಥೆಯನ್ನು ಸರಿಪಡಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಈ ಸಂಧರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎ.ಇ.ಇ ಮೋಹನ್, ಸಹಾಯಕ ಅಭಿಯಂತರ ರಜಾಕ್ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -spot_img

Most Popular