Tuesday, June 10, 2025
Homeಸುದ್ದಿಗಳುಸಕಲೇಶಪುರಬಾಳ್ಳುಪೇಟೆ ಓಂನಗರದಲ್ಲಿ ಶಾಸಕ ಎಚ್.ಕೆ ಕುಮಾರಸ್ವಾಮಿರವರಿಂದ ಹೊಸ ಅಂಗನವಾಡಿ ಕಟ್ಟಡ ಉದ್ಘಾಟನೆ

ಬಾಳ್ಳುಪೇಟೆ ಓಂನಗರದಲ್ಲಿ ಶಾಸಕ ಎಚ್.ಕೆ ಕುಮಾರಸ್ವಾಮಿರವರಿಂದ ಹೊಸ ಅಂಗನವಾಡಿ ಕಟ್ಟಡ ಉದ್ಘಾಟನೆ

ಸಕಲೇಶಪುರ: ಬಾಳ್ಳುಪೇಟೆ ಗ್ರಾ.ಪಂ ಅಭಿವೃದ್ದಿಗೆ ಬೇರೆಲ್ಲ ಗ್ರಾ.ಪಂಗಳಿಗಿಂತ ಹೆಚ್ಚಿನ ಅನುದಾನವನ್ನು ನೀಡಲಾಗಿದೆ ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.


ತಾಲೂಕಿನ ಬಾಳ್ಳುಪೇಟೆ ಓಂನಗರದಲ್ಲಿ ಹೊಸ ಅಂಗನವಾಡಿ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿ ಚಿಕ್ಕ ನಾಯಕನ ಗ್ರಾಮದಲ್ಲಿ ಸುಮಾರು 1.25 ಕೋಟಿ ವೆಚ್ಚದಲ್ಲಿ ರಸ್ತೆ ಅಭವೃದ್ದಿ ಪಡಿಸಲಾಗಿದೆ. ಸುಮಾರು 30 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿದೆ. ಓಂ ನಗರ ಹಾಗೂ ಅರಸ ನಗರದಲ್ಲಿ ಬಡವರೆ ಹೆಚ್ಚಿರುವುದರಿಂದ ಮೂಲಭೂತ ಸೌಕರ್ಯಗಳ ಅಭಿವೃದ್ದಿಗಾಗಿ ಹೆಚ್ಚಿನ ಅನುದಾನವನ್ನು ಇಲ್ಲಿಗೆ ನೀಡಲಾಗಿದೆ ಎಂದರು.
ಗ್ರಾ.ಪಂ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಬಾಳ್ಳುಪೇಟೆಗೆ ಸಮೀಪ ಇದ್ದರು ಓಂ ನಗರ ಅಭಿವೃದ್ದಿಯಲ್ಲಿ ಹಿಂದೆ ಉಳಿದಿತ್ತು ಆದರೆ ಶಾಸಕರ ಮುತುವರ್ಜಿಯಿಂದ ಈ ಕುಗ್ರಾಮ ಅಭಿವೃದ್ಧಿ ಹೊಂದಿದೆ.ಕುಡಿಯುವ ನೀರಿಗೆ ಯಾವುದೇ ಕೊರತೆ ಇಲ್ಲ. ಬಾಳ್ಳುಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ ಕೋಟ್ಯಾಂತರೂ ಅಭಿವೃದ್ದಿ ಪರ ಕೆಲಸಗಳಾಗಿವೆ ಎಂದರು.ಓಂ ನಗರದಲ್ಲಿ ಸುಮಾರು 3.25 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ನೆಡದಿವೆ. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಚಂಚಲ ಕುಮಾರ ಸ್ವಾಮಿ ಸಾಕಷ್ಟು ಬೋರ್ ವೆಲ್ಗಳನ್ನು ಸಹ ಇಲ್ಲಿಗೆ ಕೊಡುಗೆ ಆಗಿ ನೀಡಿದ್ದಾರೆ ಎಂದು ಹೇಳಿದರು.
ಗ್ರಾ.ಪಂ ಉಪಾಧ್ಯಕ್ಷೆ ರತ್ನ ಮಾತನಾಡಿ, ಅರಸು ನಗರ ಓಂ ನಗರ ವ್ಯಾಪ್ತಿಗೆ ಶಾಸಕರು ಸಾಕಷ್ಟು ಅನುದಾನ ನೀಡಿದ್ದಾರೆ. ಆದರ್ಶ ಗ್ರಾಮ ಯೋಜನೆಯಲ್ಲಿ ಅನುದಾನ ನೀಡಿದ್ದಾರೆ. ಗ್ರಾಮಸ್ತರು ಶಾಸಕರಿಗೆ ಚಿರಋಣಿ ಎಂದರು. ಶಾಸಕರು ರಾಜ್ಯದ ಮುಖ್ಯ ಮಂತ್ರಿ ಯಾಗಲಿ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಭಿಯಂತರ ಲಖನ್ ಸಿಪಾನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮೇಗೌಡ, ಗ್ರಾಮ ಪಂಚಾಯತಿ ಶಿಲ್ಪಾ ಮಲ್ಲಿಕ್, ಶಾಂತ, ಸ್ವಾಮಿ, ರಾಜೇಶ್, ರೋಹಿತ್, ಭರತ್, ಶೋಭಾ, ಯುವ ಜೆಡಿಎಸ್ ಮುಖಂಡ ಉದೀಶ್ ಲೋಕೇಶ್ ಸೇರಿದಂತೆ ಮುಂತಾದವರಿದ್ದರು.

RELATED ARTICLES
- Advertisment -spot_img

Most Popular