Sunday, April 20, 2025
Homeಸುದ್ದಿಗಳುಸಕಲೇಶಪುರಶಾಸಕ ಎಚ್.ಕೆ ಕುಮಾರಸ್ವಾಮಿರವರಿಂದ ಕಾಲು ಕಳೆದುಕೊಂಡ ವ್ಯಕ್ತಿ ಭೇಟಿ

ಶಾಸಕ ಎಚ್.ಕೆ ಕುಮಾರಸ್ವಾಮಿರವರಿಂದ ಕಾಲು ಕಳೆದುಕೊಂಡ ವ್ಯಕ್ತಿ ಭೇಟಿ

ಸಕಲೇಶಪುರ: ಭತ್ತದ ತೆನೆಯ ಅರೆಯುವ ಯಂತ್ರಕ್ಕೆ ಅಕಸ್ಮಿಕವಾಗಿ ಕಾಲು ಸಿಲುಕಿ ಒಂದು ಕಾಲು ಕಳೆದುಕೊಂಡಿರುವ ರಾಗಿಪುರ ಗ್ರಾಮಸ್ಥ ಪ್ರತಾಪ್ ರವರ ಯೋಗಕ್ಷೇಮವನ್ನು ಶಾಸಕ‌ ಎಚ್.ಕೆ ಕುಮಾರಸ್ವಾಮಿ ವಿಚಾರಿಸಿ ವೈಯುಕ್ತಿಕ ಧನಸಹಾಯವನ್ನು ಮಾಡಿದರು. ಶಾಸಕರ ಜೊತೆಗಿದ್ದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಉಜ್ಮಾರುಜ್ವಿ  ಸುದರ್ಶನ್  ರವರು ಸಹ ಧನ ಸಹಾಯ ಮಾಡಿದರು.ಈ ಸಂಧರ್ಭದಲ್ಲಿ ಶಾಸಕರು ಮಾತನಾಡಿ  ಸರ್ಕಾರದಿಂದ ಬರುವಂತಹ  ಎಲ್ಲಾ ಸೌಲಭ್ಯಗಳನ್ನು ಕೊಡಿಸಿಕೊಡುವುದಾಗಿ  ತಿಳಿಸಿದರು ಇವರ ಜೊತೆ ಹೆತ್ತೂರು  ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅನುಸೂಯ. ಸದಸ್ಯರಾದ  ಮಲ್ಲೇಶ್ ,ಹೆತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ,ಮಾಜಿ ಸದಸ್ಯರಾದ ರಮೇಶ್ ,ಜೆಡಿಎಸ್ ಮುಖಂಡರುಗಳಾದ ಸುಮನ್ ಹೆತ್ತೂರು ,ಮಂಜೂರು ಕಬಡ್ಡಿ ತಮಣ್ಣಿ, ಹಿರಿಯ ಮುಖಂಡರಾದ ಕೊತ್ನಳ್ಳಿ ತಮ್ಮಣ್ಣ ಹಾಗೂ ಗ್ರಾಮಸ್ಥರು ಇದ್ದರು

RELATED ARTICLES
- Advertisment -spot_img

Most Popular