Saturday, April 12, 2025
Homeಸುದ್ದಿಗಳುಪ್ರತಿಭಟನೆಗೆ ಹೆದರಿ ಮದ್ಯರಾತ್ರಿ ಓಡಿ ಬಂದ ಸಚಿವ ಗೋಪಾಲಯ್ಯ

ಪ್ರತಿಭಟನೆಗೆ ಹೆದರಿ ಮದ್ಯರಾತ್ರಿ ಓಡಿ ಬಂದ ಸಚಿವ ಗೋಪಾಲಯ್ಯ

ಸಕಲೇಶಪುರ : ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ಅವರು ಇಂದು ರಾತ್ರಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಆನೆ ದಾಳಿಯಿಂದ ಸಾವಿಗೀಡಾದ ಯುವಕನ ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಹೆಬ್ಬನಹಳ್ಳಿ ಗ್ರಾಮಕ್ಕೆ ಮಧ್ಯರಾತ್ರಿ ಆಗಮಿಸಿದ ಸಚಿವರು ಗ್ರಾಮಸ್ಥರು, ಬೆಳೆಗಾರರ ಸಂಘದ ಪ್ರತಿನಿಧಿನಿಧಿಗಳು ಮುಂಖಂಡರೊಂದಿಗೆ ಮಾತನಾಡಿ ದುರ್ಘಟನೆ ಬಗ್ಗೆ ವಿಷಾಧ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಯ ಆನೆ ಮಾನವ ಸಂಘರ್ಷ ಕುರಿತು ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ .ಹಿರಿಯ ಅಧಿಕಾರಿಗಳನ್ನು ಕರೆಸಿ ಸಮಸ್ಯೆ ನಿಯಂತ್ರಣ ಕ್ರಮಗಳ ಕುರಿತು ವರದಿ ಪಡೆಯಲಾಗುವುದು ಎಂದು ಸಚಿವರು ಹೇಳಿದರು..

ಮಲೆನಾಡಿನ ಈಗಾಗಲೇ ಸಹಜ ಬದುಕಿನ ಮೇಲೆ ಪ್ರತಿಕೂಲ‌ ಪರಿಣಾಮ ಬೀರಿದೆ‌. ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ‌ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರದ ಹಂತದಲ್ಲಿಯೂ ಗಮನ ಬೆಳೆದು ಸೂಕ್ತ ಕ್ರಮ ಹಾಗೂ ಶಾಶ್ವತ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಶೀಘ್ರದಲ್ಲೇ ಜಿಲ್ಲೆಯಲ್ಲಿ ಬೆಳೆಗಾರರು ,ಸಂಘಸಂಸ್ಥೆಗಳ ಮುಖಂಡರೊಂದಿಗೆ ಆನೆ ಹಾವಳಿ ತಡೆ ಕುರಿತು ಚರ್ಚೆ ನಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು

RELATED ARTICLES
- Advertisment -spot_img

Most Popular