Tuesday, June 10, 2025
Homeಸುದ್ದಿಗಳುಸಕಲೇಶಪುರಸಾಲಬಾದೆ ರೈತ ಆತ್ಮಹತ್ಯೆ

ಸಾಲಬಾದೆ ರೈತ ಆತ್ಮಹತ್ಯೆ

 

ಸಕಲೇಶಪುರ: ಸಾಲದ ಬಾದೆ ಹಿನ್ನೆಲೆಯಲ್ಲಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಬ್ಬಿನಗದ್ದೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ದಿನೇಶ್ (43) ಮೃತ ಪಟ್ಟ ದುರ್ದೈವಿಯಾಗಿದ್ದಾನೆ. ಜಮೀನಿನ ಅಭಿವೃದ್ದಿಗೆ  ಸಾಲ ಮಾಡಿಕೊಂಡಿದ್ದ ದಿನೇಶ್  ಸಾಲ ತೀರಿಸಲು ಹಲವಡೆ ಕೂಲಿ ಕೆಲಸಕ್ಕೆ ಹೋದರು ಸಹ ಸಾಲ ತೀರಿಸಲಾಗದೆ ತನ್ನ ಮನೆಯಲ್ಲೆ ನೇಣಿಗೆ ಶರಣಾಗಿದ್ದಾನೆ. ಈತನಿಗೆ 2ಎಕರೆ ಗದ್ದೆ 2ಎಕರೆ ತೋಟವಿದ್ದು ಸಾಲ ಮಾಡಿ ಬೆಳೆದ ಬೆಳೆ ಆನೆ ದಾಳಿಯಿಂದ ಯಾವುದು ಬಾರದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತನು ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಓರ್ವ ಗಂಡು ಮಗುವನ್ನು ಅಗಲಿದ್ದಾರೆ.ಸಕಲೇಶಪುರ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಮೃತನ ಶವಪರೀಕ್ಷೆ ನಡೆಯಿತು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಬ್ಬಿನಗದ್ದೆ ಗ್ರಾಮದಲ್ಲಿ ಮೃತನ ಅಂತ್ಯಸಂಸ್ಕಾರ ನಡೆಯಲಿದೆ. ಮೃತನ ಸಾವಿಗೆ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

 

RELATED ARTICLES
- Advertisment -spot_img

Most Popular