Saturday, April 19, 2025
Homeಸುದ್ದಿಗಳುಸಕಲೇಶಪುರ ಪಟ್ಟಣದ ಗುಹೆಕಲ್ಲಮ್ಮ ದೇವಸ್ಥಾನದ ಅರ್ಚಕ ರವಿಶಾಸ್ರ್ತೀರವರ ಧರ್ಮಪತ್ನಿ ಅನಾರೋಗ್ಯದಿಂದ ನಿಧನ

ಸಕಲೇಶಪುರ ಪಟ್ಟಣದ ಗುಹೆಕಲ್ಲಮ್ಮ ದೇವಸ್ಥಾನದ ಅರ್ಚಕ ರವಿಶಾಸ್ರ್ತೀರವರ ಧರ್ಮಪತ್ನಿ ಅನಾರೋಗ್ಯದಿಂದ ನಿಧನ

ಸಕಲೇಶಪುರ: ಪಟ್ಟಣದ ಬಾಳೆಗದ್ದೆ ಬಡಾವಣೆಯಲ್ಲಿರುವ ಗುಹೆಕಲ್ಲಮ್ಮ ದೇವಸ್ಥಾನದ ಅರ್ಚಕ ರವಿಶಾಸ್ತ್ರೀರವರ ಧರ್ಮಪತ್ನಿ ಮಾಧವಿ ಶಾಸ್ತ್ರೀ (49) ಅನಾರೋಗ್ಯದಿಂದ ಪಟ್ಟಣದ ಆಚಂಗಿ ಬಡಾವಣೆಯಲ್ಲಿರುವ ತಮ್ಮ ಸ್ವಗೃಹದಲ್ಲಿ ಸಂಜೆ ನಿಧನರಾಗಿದ್ದಾರೆ. ಮೃತರು ತಮ್ಮ ಪತಿ ರವಿಶಾಸ್ತ್ರೀ ಹಾಗೂ ಇಬ್ಬರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ, ಸ್ನೇಹಿತರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರ ಬುಧವಾರ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರ ಸಾವಿಗೆ ತಾಲೂಕು ಬ್ರಾಹ್ಮಣ ಸಮಾಜ, ಗುಹೆಕಲ್ಲಮ್ಮ ದೇವಸ್ಥಾನ ಸಮಿತಿ, ಡಾ.ನವೀನ್ ಚಂದ್ರಶೆಟ್ಟಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.

RELATED ARTICLES
- Advertisment -spot_img

Most Popular