Sunday, April 20, 2025
Homeಸುದ್ದಿಗಳುಬೇಲೂರು : ಅನುಘಟ್ಟ ಸೊಸೈಟಿ ಮೇಲೆ ಒಂಟಿ ಕಾಡಾನೆ ದಾಳಿ

ಬೇಲೂರು : ಅನುಘಟ್ಟ ಸೊಸೈಟಿ ಮೇಲೆ ಒಂಟಿ ಕಾಡಾನೆ ದಾಳಿ

 

ಸಕಲೇಶಪುರ ತಾಲೂಕಿನಲ್ಲಿ ಮನೆಗಳ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ ಮಕನ ಆನೆಯು ಕಳೆದ ರಾತ್ರಿ ಬೇಲೂರು ತಾಲೂಕು ಅನುಘಟ್ಟದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಗೋದಾಮಿನ ಮೇಲೆ ದಾಳಿ ನಡೆಸಿದೆ.

ಸಕಲೇಶಪುರ ತಾಲೂಕಿನಲ್ಲಿ ರಾತ್ರಿ ವೇಳೆ ಮನೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಷ್ಟವನ್ನುಂಟು ಮಾಡಿದ್ದ ಮಕನ‌ ಆನೆಯು ಇದೀಗ ಬೇಲೂರು ತಾಲೂಕಿಗೆ ಪ್ರವೇಶ ಮಾಡಿದ್ದು ಗೋಧಾಮಿನ ಬಾಗಿಲು ಮುರಿದು ಆಹಾರ ಪದಾರ್ಥಗಳನ್ನು ಎಳೆದಾಡಿ ನಾಶಪಡಿಸಿದೆ.

ಮನೆಗಳ ಮೇಲೆ ದಾಳಿ ನಡೆಸುವ ಈ ಕಾಡಾನೆಯನ್ನು ಸೆರೆಹಿಡಿಯುವಂತೆ ಹಲವಾರು ಬಾರಿ ರೈತರು ಹಾಗೂ ಸಾರ್ವಜನಿಕರು ಒತ್ತಾಯಿಸಿದರೂ ಅರಣ್ಯ ಇಲಾಖೆ ಮತ್ತು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

RELATED ARTICLES
- Advertisment -spot_img

Most Popular