Sunday, April 20, 2025
Homeಸುದ್ದಿಗಳುಸಕಲೇಶಪುರ :ಕೆಲಸ ಮಾಡದ ಪಿಡಿಓಗಳ ವಿರುದ್ದ ಕ್ರಮ: ಶಾಸಕ ಎಚ್.ಕೆ ಕುಮಾರಸ್ವಾಮಿ

ಸಕಲೇಶಪುರ :ಕೆಲಸ ಮಾಡದ ಪಿಡಿಓಗಳ ವಿರುದ್ದ ಕ್ರಮ: ಶಾಸಕ ಎಚ್.ಕೆ ಕುಮಾರಸ್ವಾಮಿ

ಕೆಲಸ ಮಾಡದ ಪಿಡಿಓಗಳ ವಿರುದ್ದ ಕ್ರಮ: ಶಾಸಕ ಎಚ್.ಕೆ ಕುಮಾರಸ್ವಾಮಿ

ಸಕಲೇಶಪುರ: ತಾಲೂಕಿನ ಕೆಲವು ಗ್ರಾ.ಪಂಗಳಲ್ಲಿ ಪಿಡಿಓಗಳು ಸರಿಯಾಗಿ ಕೆಲಸ ಮಾಡದೆ ಕಾಲಹರಣ ಮಾಡುತ್ತಿದ್ದು ಅಂತಹ ಪಿಡಿಓಗಳ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಚ್.ಕೆ ಕುಮಾರಸ್ವಾಮಿ ಹೇಳಿದರು.

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಗ್ರಾ.ಪಂ ಗಳಿಗೆ ಸರ್ಕಾರ ವಿವಿಧ ಯೋಜನೆಗಳನ್ನು ಕಾಲಮಿತಿಯೊಳಗೆ ಮುಗಿಸುವಂತೆ ಗುರಿ ನೀಡಿದ್ದು, ಕೆಲವು ಗ್ರಾ.ಪಂಗಳಲ್ಲಿ ಶೇ.40% ಗುರಿಯನ್ನು ಮುಟ್ಟದಿರುವುದು ಬೇಸರದ ಸಂಗತಿಯಾಗಿದೆ. ಕೂಡಲೆ ಸರ್ಕಾರ ನೀಡಿರುವ ಗುರಿ ಸಾಧಿಸಲು ಪಿಡಿಓಗಳು ಕ್ರಮ ಕೈಗೊಳ್ಳಬೇಕು ಎಂದರು.

ಈ ಸಂಧರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್, ತಾ.ಪಂ ಸಹಾಯಕ ನಿರ್ದೇಶಕರುಗಳಾದ ಆದಿತ್ಯ, ಹರೀಶ್, ಜಲನಯನ ಇಲಾಖೆಯ ಅಭಿಯಂತರ ರಮೇಶ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

12ಎಸ್.ಕೆ.ಪಿ.ಪಿ 1 ಸಕಲೇಶಪುರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶಾಸಕ ಎಚ್.ಕೆ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ತಾ.ಪಂ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

RELATED ARTICLES
- Advertisment -spot_img

Most Popular