Monday, June 9, 2025
Homeಕ್ರೈಮ್ಎದೆಗೆ ಗುಂಡು ಹೊಡೆದು, ಆಸ್ಪತ್ರೆಗೆ ಸೇರಿಸಿದ ಕಿರಾತಕ

ಎದೆಗೆ ಗುಂಡು ಹೊಡೆದು, ಆಸ್ಪತ್ರೆಗೆ ಸೇರಿಸಿದ ಕಿರಾತಕ

ಗುಂಡು ಹಾರಿಸಿ ವೈರಿಯನ್ನು ಕೊಂದ ಆರೋಪಿಯೆ ಯಾರಿಗೂ ಅನುಮಾನ ಬಾರದಿರಲಿ ಎಂದು ಮೃತ ನವೀನ್ ಸೇರಿದಂತೆ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದ
ಸಕಲೇಶಪುರ: ತಾಲೂಕಿನ ತಂಬಲಗೇರಿಯಲ್ಲಿ ಮಂಗಳವಾರ ರಾತ್ರಿ ಗುಂಡೇಟಿನಿಂದ ಮೃತಪಟ್ಟ ನವೀನ್ ಕೊಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ವೈಯುಕ್ತಿಕ ದ್ವೇಷದ ಹಿನ್ನಲೆಯಲ್ಲಿ ಷೂಟ್ ಔಟ್ ಆಗಿರುವುದು ಖಚಿತವಾಗಿದೆ. ನವೀನ್ ಮಾಡುತ್ತಿದ್ದ ಅಕ್ರಮ ಮರಳು ಧಂಧೆ ಕುರಿತು ನಾಗರಾಜ್ ಪೋಲಿಸರಿಗೆ ಮಾಹಿತಿ ನೀಡಿದ್ದನೆಂಬ ಅನುಮಾನದಿಂದ ನವೀನ್ ನಾಗರಾಜ್‌ಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಬೇಸತ್ತ ನವೀನ್ ಮನೆಯ ಸಮೀಪವೆ ಇರುವ ನಾಗರಾಜ್ (64) ಅನಿಲ್ (28) ನನ್ನು ಜೊತೆಗೆ ಕರೆದುಕೊಂಡು ಹೋಗಿ ಮೀನುಗಾರಿಕೆ ಮಾಡುತ್ತಿದ್ದ ತಂಡದ ಮೇಲೆ ಗುಂಡು ಹಾರಿಸಿದ ಪರಿಣಾಮ ನವೀನ್ ಸ್ಥಳದಲ್ಲೆ ಮೃತಪಟ್ಟಿದ್ದು, ಯಾರಿಗೂ ಅನುಮಾನ ಬಾರದಿರಲಿ ಎಂದು ಆರೋಪಿ ನಾಗರಾಜ ಆಲಿಯಾಸ್ ದುಬಾಸಿ ಗೌಡ ಮೃತ ನವೀನ್ ಸೇರಿದಂತೆ ಇನ್ನಿಬ್ಬರು ಗಾಯಾಳುಗಳಾದ ಪದ್ಮನಾಭ್ ಹಾಗೂ ದಯಾನಂದ್‌ರವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲು ಸಹಕರಿಸಿದ್ದ, ನಾಗರಾಜ್ ಗುಂಡು ಹಾರಿಸಿರುವುದು ಖಚಿತವಾಗಿದ್ದು ನಾಗರಾಜ್ ಜೊತೆ ಹೋಗಿದ್ದ ಅನಿಲ್ ವಿನಾಕಾರಣ ಪ್ರಕರಣದಲ್ಲಿ ಬಲಿ ಪಶು ವನ್ನೇ ಕಾಯಿದೆ. ಒಟ್ಟಾರೆ ಅಕ್ರಮ ಮರಳುಗಾರಿಕೆ ವಿಷಯಕ್ಕೆ ವ್ಯಕ್ತಿಯೋರ್ವ ಬಲಿಯಾಗುವಂತಾಗಿರುವುದು ಬೇಸರದ ಸಂಗತಿಯಾಗಿದೆ.

RELATED ARTICLES
- Advertisment -spot_img

Most Popular