Friday, July 4, 2025
Homeಸುದ್ದಿಗಳುಸಕಲೇಶಪುರಬೆಳೆಗಾರರು ಹಾಗೂ ರೈತರಿಗೆ ಗುಡ್ ನ್ಯೂಸ್ ನೀಡಿದ ಶಾಸಕ ಸಿಮೆಂಟ್ ಮಂಜು.

ಬೆಳೆಗಾರರು ಹಾಗೂ ರೈತರಿಗೆ ಗುಡ್ ನ್ಯೂಸ್ ನೀಡಿದ ಶಾಸಕ ಸಿಮೆಂಟ್ ಮಂಜು.

 ಬೆಳೆಗಾರರು ಹಾಗೂ ರೈತರಿಗೆ ಗುಡ್ ನ್ಯೂಸ್ ನೀಡಿದ ಶಾಸಕ ಸಿಮೆಂಟ್ ಮಂಜು.

ಬೆಳೆಗಾರರ ಬೆಳೆ ವಿಮಾ ಯೋಜನೆ ಪಾವತಿಗೆ ಜುಲೈ 15ರವರೆಗೂ ವಿಸ್ತರಣೆಗೆ ಸೂಚಿಸಿದ ತೋಟಗಾರಿಕಾ ಸಚಿವರು.

ಅವಧಿ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದ ಶಾಸಕರು.

ಬೆಂಗಳೂರು : ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ(RWBCIS) ಅನುಷ್ಠಾನ ಸಂಬಂಧ  2024- 25 ಸಾವಿನ ಮುಂಗಾರು ಮತ್ತು ಹಿಂಗಾರು ಹಂಗಾಮಗಳಿಗೆ ಜಿಲ್ಲಾ ಕ್ಲಸ್ಟರ್ ವಾರು ವಿಮ ಸಂಸ್ಥೆಗಳು  ನಿಗದಿಪಡಿಸಿದ್ದ ಅಂತಿಮ ದಿನಾಂಕವನ್ನು 15 ದಿನ ವಿಸ್ತರಣೆ ಮಾಡಲಾಗಿದೆ.

 ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ರವರು ರವರು ಬೆಂಗಳೂರಿನಲ್ಲಿ ತೋಟಗಾರಿಕಾ ಸಚಿವ ಎಸ್. ಎಸ್ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ವಿಮೆ ಪಾವತಿಯ ದಿನಾಂಕವನ್ನು ವಿಸ್ತರಣೆ ಮಾಡುವಂತೆ ಮನವಿ ಮಾಡಿದರು. 

ಜಿಲ್ಲೆಗಳಲ್ಲಿ (ಹಾಸನ, ಉಡುಪಿ, ತುಮಕೂರು, ದಾವಣಗೆರೆ ಮತ್ತು ವಿಜಯಪುರ) ಅಡಿಕೆ, ಮೆಣಸು, ದಾಳಿಂಬೆ, ಬೀಟಲ್‌ವೈನ್, ಪಪ್ಪಾಯಿ ಮತ್ತು ಆಮ್ಲ ನಿಂಬೆ ಬೆಳೆಗಳಿಗೆ ಕಟ್-ಆಫ್ ದಿನಾಂಕ ವಿಸ್ತರಣೆಯನ್ನು ಉಲ್ಲೇಖಿಸಲಾಗಿದೆ. ಅಧಿಸೂಚನೆ ಹೊರಡಿಸುವಲ್ಲಿ ವಿಳಂಬವು ಈ ಋತುವಿನಲ್ಲಿ ದಾಖಲಾತಿಗೆ ಕಡಿಮೆ ಸಮಯ ಮತ್ತು ರೈತರ ಕಡಿಮೆ ದಾಖಲಾತಿಗೆ ಕಾರಣವಾಗಿದ್ದು ಶಾಸಕರು ರೈತರ ಹಾಗೂ ಬೆಳೆಗಾರರ ಹಿತ ದೃಷ್ಟಿಯಿಂದ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಕುರಿತಂತೆ ಪರಿಶೀಲನೆ ನಡೆಸಿದ ಸಚಿವರು ವಿಮೆ ಪಾವತಿಗೆ 2025-ರೆಗ್ ಅಡಿಯಲ್ಲಿ RWBCIS ಅಡಿಯಲ್ಲಿ ಕೆಲವು ಬೆಳೆಗಳ ನೋಂದಣಿಗೆ ಕಟ್-ಆಫ್ ದಿನಾಂಕವನ್ನು ಜುಲೈ 15, 2025 ರವರೆಗೆ ವಿಸ್ತರಿಸಲಾಗಿದೆ.

RELATED ARTICLES
- Advertisment -spot_img

Most Popular