ಸಕಲೇಶಪುರ : ಚಿರತೆ ದಾಳಿಗೆ ಕುರಿಗಳು ಬಲಿ
ಸಕಲೇಶಪುರ : ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ ಚಿರತೆ ದಾಳಿ ನೆಡೆಸಿ ನಾಲ್ಕು ಕುರಿಗಳುಗಳನ್ನು ಬಲಿ ಪಡೆದುಕೊಂಡಿರುವ ಘಟನೆ ಸೋಮವಾರ ಸಂಜೆ ನೆಡೆದಿದೆ.
ಕುನಿಗನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಹೊಸಗದ್ದೆ ಗ್ರಾಮದ ಅರುಣ್ ಅವರಿಗೆ ಸೇರಿದ ನಾಲ್ಕು ಕುರಿಗಳನ್ನು ಮನೆಯಿಂದ ಅನತಿ ದೂರದಲ್ಲಿ ಮೇಯಲು ಕಟ್ಟಿ ಹಾಕಿರುವ ಸಂಧರ್ಭದಲ್ಲಿ ದಾಳಿ ಮಾಡಿರುವ ಚಿರತೆ ಒಂದು ಕುರಿಯನ್ನು ಸ್ಥಳದಲ್ಲಿ ಸಂಪೂರ್ಣವಾಗಿ ತಿಂದು ಇನ್ನು ಮೂರು ಕುರಿಗಳ ಕತ್ತು ಸೀಳಿ ಕೊಂದು ಹಾಕಿದೆ.
ವಿಷಯ ತಿಳಿಯುತ್ತಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.ಕುರಿಗಳ ಕತ್ತಿನ ಭಾಗಕ್ಕೆ ತಿಂದು ಹಾಕಿರುವುದ್ದರಿಂದ ಮೇಲ್ನೋಟಕ್ಕೆ ಚಿರತೆ ದಾಳಿ ಇರಬಹುದು ಎಂದು ಶಂಕಿಸಿದ್ದಾರೆ.ನಾಳೆ ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ನಿಖರ ಕಾರಣ ತಿಳಿದು ಬರಲಿದೆ ಎಂದು ವಲಯ ಅರಣ್ಯ ಅಧಿಕಾರಿ ಹೇಮಂತ್ ತಿಳಿದಿದ್ದಾರೆ.
ಕೆಲ ತಿಂಗಳುಗಳಿಂದ ಈ ಭಾಗದಲ್ಲಿ ಚಿರತೆ ಚಲನವಲನ ಕಂಡು ಬಂದಿದ್ದು ಈ ಕುರಿತಂತೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೆವು. ಆದರೆ ಇದುವರೆಗೂ ಅರಣ್ಯ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಭಾಗದ ಜನರು ದಿನ ನಿತ್ಯ ಭಯ ಭೀತಿಯಲ್ಲಿ ತಿರುಗಾಡುವ ಪರಿಸ್ಥಿತಿ ಎದುರಾಗಿದ್ದು ಹಂತಕ ಚಿರತೆಯನ್ನು ಕೂಡಲೇ ಸೆರೆ ಹಿಡಿಯಬೇಕು. ಚಿರತೆ ದಾಳಿಯಿಂದ ಮೃತ ಪಟ್ಟಿರುವ ಕುರಿಗಳ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಬೇಕುಎಂದು ಕುನಿಗನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಕಾಶ್ ಆಗ್ರಹಿಸಿದ್ದಾರೆ.