Saturday, April 19, 2025
Homeಸುದ್ದಿಗಳುಸಕಲೇಶಪುರಹೆತ್ತೂರು ನಾಡ ಕಚೇರಿಗೆ ದಿಡೀರ್ ಭೇಟಿ ನೀಡಿದ- ಶಾಸಕ ಸಿಮೆಂಟ್ ಮಂಜು

ಹೆತ್ತೂರು ನಾಡ ಕಚೇರಿಗೆ ದಿಡೀರ್ ಭೇಟಿ ನೀಡಿದ- ಶಾಸಕ ಸಿಮೆಂಟ್ ಮಂಜು

ಹೆತ್ತೂರು ನಾಡ ಕಚೇರಿಗೆ ದಿಡೀರ್ ಭೇಟಿ ನೀಡಿದ- ಶಾಸಕ ಸಿಮೆಂಟ್ ಮಂಜು

ಶಾಸಕರ ದಿಡೀರ್ ಭೇಟಿಗೆ ಅಧಿಕಾರಿಗಳು ಸುಸ್ತು

ಸಕಲೇಶಪುರ : ಅಧಿಕಾರಿಗಳ ಚಳಿ ಬಿಡಿಸುವುದರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತನ್ನದೇ ಕಾರ್ಯವೈಖರಿ ಹೆಸರಿಗಿರುವ ಶಾಸಕ ಸಿಮೆಂಟ್ ಮಂಜು ಇಂದು ಹೆತ್ತೂರು ಉಪ ತಹಸೀಲ್ದಾರ್ ರಿರುವ ನಾಡ ಕಚೇರಿ ಗೆ ದಿಡೀರ್ ಭೇಟಿ ನೀಡುವ ಮೂಲಕ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದರು.

ಇಂದು ಮಧ್ಯಾಹ್ನ ಐಗೂರು ಗ್ರಾಮ ಸಭೆ ಮುಗಿಸಿಕೊಂಡು ವಣಗೂರಿಗೆ ತೆರಳಿ ನಂತರ ಸಕಲೇಶಪುರಕ್ಕೆ ಹಿಂದಿರುಗುವಾಗ ನಾಡಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದರು.

ಶಾಸಕರು ಭೇಟಿ ನೀಡಿದ ವೇಳೆ ಕಚೇರಿಯಲ್ಲದ ಉಪ ತಹಸೀಲ್ದಾರ್ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡರು. ಪಾಣಿ ಸೇರಿದಂತೆ ಇನ್ನಿತರ ಸೇವೆಗಳಿಗಾಗಿ ಕಚೇರಿಗೆ ಆಗಮಿಸಿದ ಸಾರ್ವಜನಿಕರಿಗೆ ತುರ್ತಾಗಿ ಕೆಲಸ ಮಾಡಿಕೊಡುವಂತೆ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಸೂಚಿಸಿದರು.

RELATED ARTICLES
- Advertisment -spot_img

Most Popular