Sunday, April 20, 2025
Homeಸುದ್ದಿಗಳುಕರ್ನಾಟಕ ಬಂದ್ ಗೆ ಸಕಲೇಶಪುರ ಬ್ರಾಹ್ಮಣ ಸಂಘ ಬೆಂಬಲ

ಕರ್ನಾಟಕ ಬಂದ್ ಗೆ ಸಕಲೇಶಪುರ ಬ್ರಾಹ್ಮಣ ಸಂಘ ಬೆಂಬಲ

ತಾಲೂಕು ಬ್ರಾಹ್ಮಣ ಸಮಾಜದಿಂದ ಕರ್ನಾಟಕ ಬಂದ್‌ಗೆ ಮನವಿ.

ಸಕಲೇಶಪುರ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ತಾಲೂಕು ಬ್ರಾಹ್ಮಣ ಸಮಾಜ ಬೆಂಬಲ ನೀಡುತ್ತಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಶಿವಪ್ರಕಾಶ್ ಧನಾವತ್ ಹಾಗೂ ಕಾರ್ಯದರ್ಶಿ ಆರ್.ಎನ್ ಶಿವಶಂಕರ್ ತಿಳಿಸಿದ್ದಾರೆ.

   ಕಾವೇರಿ ನದಿ ಬಳಕೆ ನಮ್ಮ ಹಕ್ಕು, ನಮ್ಮ ರಾಜ್ಯದಲ್ಲೆ ನೀರು ಇಲ್ಲದಿರುವಾಗ ತಮಿಳುನಾಡಿಗೆ ಬಿಡುವುದು ಎಷ್ಟು ಸರಿ? ಕಳೆದ ವರ್ಷ ತಮಿಳುನಾಡಿಗೆ ನಾವು ವಾಡಿಕೆಗಿಂತ ಹೆಚ್ಚು ನೀರನ್ನು ಬಿಟ್ಟಿದ್ದೇವು. ಆದರೆ ರಾಜ್ಯದಲ್ಲಿ ಮಳೆಯಿಲ್ಲದೆ ಕುಡಿಯುವ ನೀರಿಗೆ ಹಾಹಾಕಾರ ಎದ್ದಾಗ ತಮಿಳುನಾಡಿಗೆ ನೀರು ಬಿಡುವುದು ಎಷ್ಟು ಸರಿ? ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ತಾಲೂಕು ಬ್ರಾಹ್ಮಣ ಸಮಾಜದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ಸಮಾಜದ ಎಲ್ಲಾ ಬಂದುಗಳು ಬಂದ್‌ಗೆ ಬೆಂಬಲ ನೀಡುತ್ತೇವೆ ಎಂದಿದ್ದಾರೆ.

RELATED ARTICLES
- Advertisment -spot_img

Most Popular