Saturday, April 19, 2025
Homeಸುದ್ದಿಗಳುಜಾನಕೆರೆ ಸಾಗರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೆಂಪೇಗೌಡ ಯುವ ಸೇನೆ ಟ್ರಸ್ಟ್ ...

ಜಾನಕೆರೆ ಸಾಗರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಕೆಂಪೇಗೌಡ ಯುವ ಸೇನೆ ಟ್ರಸ್ಟ್ ಆಗ್ರಹ.

 

ಸಕಲೇಶಪುರ :- ಕೆಂಪೆಗೌಡ ಯುವಸೇನೆ ಟ್ರಸ್ಟಿನ ಕಾರ್ಯಕರ್ತರಾದ ಮಂಜುನಾಥ್ ಮೇಲೆ ಕರವೇ ಸ್ವಾಭಿಮಾನಿ ಸಂಘದ ಅಧ್ಯಕ್ಷ ಜಾನೆಕೆರೆ ಸಾಗರ್ ಸುಳ್ಳು ಆರೋಪ ಮಾಡಿ ಕೊಲೆ ಬೆದರಿಕೆ ಕೇಸು ದಾಖಲಿಸಲು ದೂರು ನೀಡಿರುವುದು ಖಂಡಿಸಿ ಸಾಗರ್ ವಿರುದ್ಧ ಸೂಕ್ತ ಕ್ರಮ ವಹಿಸಬೇಕು ಎಂದು ಯುವ ಸೇನೆ ಟ್ರಸ್ಟ್ ಆರೋಪಿಸಿ ಪೋಲೀಸ್ ಠಾಣೆ, ವೀರಶೈವ ಸಮಾಜ ಹಾಗೂ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ

ಈ ವೇಳೆ ಕೆಂಪೇಗೌಡ ಯುವಸೇನೆ ಟ್ರಸ್ಟ್ ಅಧ್ಯಕ್ಷ ಸಚಿನ್ ಮಾತನಾಡಿ,ಸಾಗರ್ ರವರ ವಿರುದ್ಧ ವ್ಯಾಟ್ಸಪ್ ನಲ್ಲಿ ಬಂದಿರುವ ಸಂದೇಶವನ್ನು ನಮ್ಮ ಸಂಘಟನೆಯ ಕಾರ್ಯಕರ್ತನಾದ ಮಂಜುನಾಥ್ ಮೇಲೆ ಹೊರಸಿ ಇಲ್ಲ ಸಲ್ಲದ ಆರೋಪವನ್ನು ಮಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಆರೋಪಗಳು ಸತ್ಯಕ್ಕೆ ದೂರವಾಗಿದ್ದು ವಿನಃ ಕಾರಣ ನಮ್ಮ ಸಂಘಟನೆಯವರ ಮೇಲೆ ಗೂಬೆ ಕುರಿಸಲಾಗಿದೆ. ಸಾಗರ್ ರವರು ಅಧಿಕಾರಿಗಳಿಗೆ ಬೆದರಿಸಿ ಹಣ ಕೀಳುವುದು, ಜಾತಿ ಜಾತಿ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ ತಾಲ್ಲೊಕಿನಲ್ಲಿ ಕೆಲ ಆಕ್ರಮ ದಂದೆಯಲ್ಲಿ ಶಾಮಿಲಾಗಿದ್ದು ಕಾನೂನು ಬಾಹಿರವ ಚಟುವಟಿಕೆ ಮಾಡಲು ಕುಮ್ಮಕ್ಕೂ ನಿಡುತಿದ್ದು ತಾಲ್ಲೂಕಿನಲ್ಲಿ ಶಾಂತಿಗೆ ಭಂಗ ತರುತಿದ್ದಾರೆ ಆದ್ದರಿಂದ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

RELATED ARTICLES
- Advertisment -spot_img

Most Popular