Sunday, April 20, 2025
Homeಕ್ರೈಮ್ಗೋಮಾಂಸ ಮಾರಾಟ ಯತ್ನ ವಿಫಲಗೊಳಿಸಿದ ಗ್ರಾಮಸ್ಥರು. ಒಮಿನಿ ಕಾರ್ ಸ್ಥಳದಲ್ಲಿ ಬಿಟ್ಟು ಚಾಲಕ ಪರಾರಿ

ಗೋಮಾಂಸ ಮಾರಾಟ ಯತ್ನ ವಿಫಲಗೊಳಿಸಿದ ಗ್ರಾಮಸ್ಥರು. ಒಮಿನಿ ಕಾರ್ ಸ್ಥಳದಲ್ಲಿ ಬಿಟ್ಟು ಚಾಲಕ ಪರಾರಿ

ಬಕ್ರಿದ್ ಹಬ್ಬದ ದಿನವೇ ಅಕ್ರಮ ಗೋಮಾಂಸ ಮಾರಾಟ ಯತ್ನ ವಿಫಲಗೊಳಿಸಿದ ಗ್ರಾಮಸ್ಥರು.

 ಒಮಿನಿ ಕಾರ್ ಸ್ಥಳದಲ್ಲಿ ಬಿಟ್ಟು ಚಾಲಕ ಪರಾರಿ

ಸಕಲೇಶಪುರ : ದಿನದಿಂದ ದಿನಕ್ಕೆ ತಾಲೂಕಿನಲ್ಲಿ ಅಕ್ರಮ ಗೋಸಾಗಾಟ ಹಾಗೂ ಗೋಮಾಂಸ ಮಾರಾಟ ಎಗ್ಗಿಲದೇ ನಡೆಯುತ್ತಿದೆ.

 ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಪೊಲೀಸರು ಇದಕ್ಕೆ ಕಡಿವಾಣ ಹಾಕಲು ಮುಂದಾಗುತ್ತಿದ್ದು ಆದರು ಸಹ ಅಕ್ರಮ ಗೋ ಮಾಂಸ ಮಾರಾಟ ನಡೆಯುತ್ತಿದೆ.

 ಇಂದು ಮುಂಜಾನೆ ತಾಲೂಕಿನ ಹಾನುಬಾಳು ಹೋಬಳಿ ಹುರುಡಿ ಗ್ರಾಮದ ವೃತ್ತದ ಸಮೀಪ ಅಚ್ಚರಡಿ ಗ್ರಾಮದಲ್ಲಿ ಕೆಂಪು ಓಮಿನಿ ಕಾರೊಂದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟಲು ಯತ್ನಿಸುತ್ತಿದ್ದ ವೇಳೆ ಗ್ರಾಮಸ್ಥರು ಕೈಗೆ ಸಿಕ್ಕಿಬಿದ್ದು ಕಾರನ್ನು ಸ್ಥಳದಲ್ಲೇ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ.

 ಅಚ್ಚರಡಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಕಾಫಿ ತೋಟದ ಲೈನ್ ಮನೆಗಳಿಗೆ ಅಕ್ರಮ ಗೋಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ತಿಳಿದು ಬಂದಿದೆ.

 ಕಾರನ್ನು ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

RELATED ARTICLES
- Advertisment -spot_img

Most Popular