Saturday, April 19, 2025
Homeಸುದ್ದಿಗಳುಸಕಲೇಶಪುರಉದ್ಯಮಿ ಆದಿಲ್ ಖಾನ್ ನಿಧನ

ಉದ್ಯಮಿ ಆದಿಲ್ ಖಾನ್ ನಿಧನ

ಉದ್ಯಮಿ ಆದಿಲ್ ಖಾನ್ ನಿಧನ

ಸಕಲೇಶಪುರ: ಪಟ್ಟಣದ ಅಶೋಕ ರಸ್ತೆಯ ನಿವಾಸಿ ಉದ್ಯಮಿ ಆದಿಲ್ ಖಾನ್ (53) ಹೃದಯಾಘಾತದಿಂದ ನಿಧನರಾಗಿದ್ದಾರೆ. ಸ್ನೇಹಮಯಿಯಾಗಿದ್ದ ಆದಿಲ್ ಖಾನ್ ಅಪಾರ ಸ್ನೇಹಿತರನ್ನು ಹೊಂದಿದ್ದರು. ಮುಸ್ಲಿಂ ಜನಾಂಗದಲ್ಲಿ ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದ ಆದಿಲ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಆರ್.ಎಸ್.ಎಸ್ ಅಂಗ ಸಂಸ್ಥೆಗಳು ನಿಧಿ ಸಂಗ್ರಹ ಮಾಡುವಾಗ ಆದಿಲ್ ಖಾನ್ ಸ್ವಯಂಪ್ರೇರಿತರಾಗಿ ಉತ್ತಮ ನಿಧಿಯನ್ನು ಅರ್ಪಿಸಿದ್ದರು.ಮೃತರು ತಮ್ಮ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  ಶಾಸಕ ಸಿಮೆಂಟ್ ಮಂಜುರವರು ಮೃತರ  ಅಂತಿಮ ದರ್ಶನ ಮಾಡಿ ಆದಿಲ್ ಖಾನ್ ರವರ ನಿಧನ ಅತ್ಯಂತ ಬೇಸರದ ಸಂಗತಿಯಾಗಿದೆ. ಬಾಲ್ಯದಲ್ಲಿ ಅವರನ್ನು ನೋಡಿಕೊಂಡು ಬೆಳೆದವರು ನಾವು, ಅವರ ಸಾವು ನನಗೆ ಅತ್ಯಂತ ಬೇಸರ ತಂದಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ಅವರ ಸಾವಿನ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದರು. ಮೃತರ ಅಂತ್ಯ ಸಂಸ್ಕಾರ ಪಟ್ಟಣದ ಕುಶಾಲನಗರ ಬಡಾವಣೆಯಲ್ಲಿರುವ ಮುಸ್ಲಿಂ ಜನಾಂಗದ ಕಬರ್ ಸ್ಥಾನ್ ನಲ್ಲಿ ನಡೆಯಲಿದೆ.

RELATED ARTICLES
- Advertisment -spot_img

Most Popular