Sunday, April 20, 2025
Homeಸುದ್ದಿಗಳುಸಕಲೇಶಪುರಬಿ.ಎಸ್.ವೈ ಭೇಟಿಯಾದ ನೂತನ ಶಾಸಕ ಸಿಮೆಂಟ್ ಮಂಜುನಾಥ್.

ಬಿ.ಎಸ್.ವೈ ಭೇಟಿಯಾದ ನೂತನ ಶಾಸಕ ಸಿಮೆಂಟ್ ಮಂಜುನಾಥ್.

ಬಿ.ಎಸ್.ವೈ ಭೇಟಿಯಾದ ನೂತನ ಶಾಸಕ ಸಿಮೆಂಟ್ ಮಂಜುನಾಥ್.

ಸಿಮೆಂಟ್ ಮಂಜು ಜೊತೆಗೆ ಸಾಥ್ ನೀಡಿದ ಸಕಲೇಶಪುರ ಬಿಜೆಪಿ ಮುಖಂಡರು.

ಬೆಂಗಳೂರು :ಸಕಲೇಶಪುರ, ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಸಿಮೆಂಟ್ ಮಂಜುನಾಥ್ ರವರು ಇಂದು ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.

ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನವರ ನಿವಾಸದಲ್ಲಿ ಸಕಲೇಶಪುರ ಬಿಜೆಪಿ ಮುಖಂಡರ ಜೊತೆ ಸಿಮೆಂಟ್ ಮಂಜುನಾಥ್ ಭೇಟಿಯಾದರು. ಈ ವೇಳೆ ಯಡಿಯೂರಪ್ಪ ನವರು ನೂತನವಾಗಿ ವಿಧಾನಸಭೆ ಆಯ್ಕೆಯಾದ ಸಿಮೆಂಟ್ ಮಂಜು ಅವರಿಗೆ ಶುಭಕೋರಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುವುದರ ಜೊತೆಗೆ ಮುಂದಿನ ಭವಿಷ್ಯ ರೂಪಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡರಾದ ಎ. ವಿ ನರೇಶ್, ಪುನೀತ್ ಬನ್ನಳ್ಳಿ, ಶರತ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular