Sunday, April 20, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ತಾಲೂಕು ಬ್ರಾಹ್ಮಣ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಸಕಲೇಶಪುರ ತಾಲೂಕು ಬ್ರಾಹ್ಮಣ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಸಕಲೇಶಪುರ: ತಾಲೂಕು ಬ್ರಾಹ್ಮಣ ಸಮಾಜದ ನೂತನ ಅಧ್ಯಕ್ಷರಾಗಿ ಶ್ರೀಪ್ರಕಾಶ್ ಧನಾವತ್, ಗೌರವ ಅಧ್ಯಕ್ಷರಾಗಿ ಕಬ್ಬಿನಗದ್ದೆ ಅನಂತ್ ರಾಮು, ಸೂರ್ಯನಾರಾಯಣ, ಉಪಾಧ್ಯಕ್ಷರಾಗಿ ರಘೋತ್ತಮ್, ಪ್ರಧಾನ ಕಾರ್ಯದರ್ಶಿಯಾಗಿ ಆರ್.ಎನ್ ಶಿವಶಂಕರ್, ಸಹ ಕಾರ್ಯದರ್ಶಿಯಾಗಿ ರಾಜೀವ್ ಹಳ್ಳಿಬೈಲು, ಖಚಾಂಚಿಯಾಗಿ ಕುಮಾರ್ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಪ್ರಕಾಶ್ ಮಾತನಾಡಿ ಮೇಲ್ನೋಟಕ್ಕೆ ಬ್ರಾಹ್ಮಣ ಸಮಾಜ  ಮುಂದುವರೆದ ಸಮಾಜವಾದರು ಸಮಾಜ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಬ್ರಾಹ್ಮಣರ ಜನಸಂಖ್ಯೆ ಕಡಿಮೆಯಿರುವುದರಿಂದ ರಾಜಕೀಯ ಪಕ್ಷಗಳು ಬ್ರಾಹ್ಮಣರಿಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಬ್ರಾಹ್ಮಣ ಸಮಾಜದಲ್ಲೂ ಬಡವರಿದ್ದು ಸಮಾಜದ ಏಳಿಗೆಗಾಗಿ ನಿರಂತವಾಗಿ ಶ್ರಮಿಸುತ್ತೇನ ಎಂದರು.

  ನೂತನ  ಪ್ರಧಾನ ಕಾರ್ಯದರ್ಶಿ ಆರ್.ಎನ್ ಶಿವಶಂಕರ್ ಮಾತನಾಡಿ ಈ ಹಿಂದಿನ ಪದಾಧಿಕಾರಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಮಾಜವನ್ನು ಸಂಘಟನೆ ಮಾಡಿ , ಸಮಾಜದ ಬಂಧುಗಳ ಕಷ್ಟ ಸುಖಗಳಿಗೆ ಸ್ಪಂದನೆ ಮಾಡಲಾಗುವುದು ಎಂದರು.

 

   ಈ ಸಂಧರ್ಭದಲ್ಲಿ ತಾಲೂಕು ಬ್ರಾಹ್ಮಣ ಸಮಾಜದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀನಿವಾಸ್ ಮೂರ್ತಿರವರನ್ನು ನೂತನ ಪದಾಧಿಕಾರಿಗಳು ಗೌರವಿಸಿದರು.

   ಸಮಾಜದ ಮುಖಂಡರುಗಳಾದ ಮೈಲಾರ್,ಸೋಮೇಶ್, ಬಾಲಣ್ಣ, ಶ್ರೀಕಾಂತ್, ಮಂಜುನಾಥ್ ಪ್ರಸಾದ್, ವಿಪ್ರ ಮಹಿಳಾ ಸಂಘಟನೆಯ ಮಾಲಿನಿ ಸೋಮೇಶ್, ನಾಗಮಣಿ ಕೃಷ್ಣಮೂರ್ತಿ ಹಾಜರಿದ್ದರು.

RELATED ARTICLES
- Advertisment -spot_img

Most Popular