Thursday, March 20, 2025
Homeಸುದ್ದಿಗಳುಸಕಲೇಶಪುರಹಾಲೇ ಬೇಲೂರು ಅಕ್ರಮ ಗೋ ಮಾಂಸ ಪ್ರಕರಣ:ದಲಿತರ ಮೇಲೆಯೆ ಜಾತಿ ನಿಂದನೆ ವಿಚಿತ್ರ ಪ್ರಕರಣ

ಹಾಲೇ ಬೇಲೂರು ಅಕ್ರಮ ಗೋ ಮಾಂಸ ಪ್ರಕರಣ:ದಲಿತರ ಮೇಲೆಯೆ ಜಾತಿ ನಿಂದನೆ ವಿಚಿತ್ರ ಪ್ರಕರಣ


ಸಕಲೇಶಪುರ: ನೈತಿಕ‌ ಪೋಲಿಸ್ ಗಿರಿ ಆರೋಪದ ಮೇಲೆ ನಾಲ್ಕು ಜನ‌ ಭಜರಂಗದಳ ಕಾರ್ಯಕರ್ತರ ಮೇಲೆ ಮೇಲೆ ಜಾತಿ ನಿಂದನೆ 324, 504,506 ಸೆಕ್ಷನ್ ನಡಿ ಪ್ರಕರಣ ದಾಖಲಾಗಿದೆ. ಶಿವು ಜಿಪ್ಪಿ, ರವಿ, ರವಿ ಮಳಲಿ, ಶ್ರೀಜಿತ್ ಗೌಡರವರುಗಳ ಮೇಲೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈ ನಾಲ್ವರಲ್ಲಿ ಮೂವರು ದಲಿತರೆಂದು ಹೇಳಲಾಗುತ್ತಿದೆ. ಈ ಸಂಭಂದ ಭಜರಂಗದಳ ರಾಜ್ಯ ಸಹ ಸಂಚಾಲಕ‌ ರಘು ಸಕಲೇಶಪುರ ಮಾತನಾಡಿ ತಾಲೂಕಿನಲ್ಲಿ ಅಕ್ರಮ ಗೋಮಾಂಸ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ.ಗೋಹತ್ಯೆ ನಿಷೇದ ಕಾನೂನು ರಾಜ್ಯದಲ್ಲಿ ಜಾರಿಯಲ್ಲಿ ದ್ದರು ಪೋಲಿಸರು ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ.ಹಾಲೇ ಬೇಲೂರು ಗ್ರಾಮದಲ್ಲಿ ಅಕ್ರಮ ಗೋಮಾಂಸ ಮಾರಾಟ ಕುರಿತು ಮಾಹಿತಿ ನೀಡಿದಕ್ಕೆ ನಮ್ಮ ಕಾರ್ಯಕರ್ತರ ಮೇಲೆ ದೂರು ದಾಖಲಿಸಿರುವುದು ಖಂಡನೀಯ ಎಂದಿದ್ದಾರೆ.

RELATED ARTICLES
- Advertisment -spot_img

Most Popular